ಚಲಿಸುತ್ತಿದ್ದ ಟ್ರೈನಿನಲ್ಲಿ ಬ್ಯಾಂಕ್ ಅಧಿಕಾರಿಯ ಕೊಲೆ

ಪಾಟ್ನಾ: ಚಲಿಸುತ್ತಿದ್ದ ಟ್ರೈನಿನಲ್ಲಿ ದುಷ್ಕರ್ಮಿಗಳು ಬ್ಯಾಂಕ್ ಅಧಿಕಾರಿಯನ್ನು ಕೊಲೆ ಮಾಡಿದ ಘಟನೆ ಗುರುವಾರ ಬಿಹಾರದಲ್ಲಿ ನಡೆದಿದೆ.

ಮಿಲಿಂದ್ ಕುಮಾರ್ (28) ಕೊಲೆಯಾದ ಬ್ಯಾಂಕ್ ಅಧಿಕಾರಿ. ಮಿಲಿಂದ್ ಜಮುಯಿ ಜಿಲ್ಲೆಯಲ್ಲಿ ಇರುವ ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಮಿಲಿಂದ್ ಗಾಯ-ಜಮಲ್‍ಪುರ ರೈಲಿನಲ್ಲಿ ಸಂಚರಿಸುತ್ತಿದ್ದಾಗ ದುಷ್ಕರ್ಮಿಗಳು ಚಾಕು ಇರಿದಿದು, ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾರೆ.

ಮಿಲಿಂದ್ ಬ್ಯಾಂಕ್ ಮೀಟಿಂಗ್ ಮುಗಿಸಿದ ನಂತರ ಕಿಯುಲ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಸರಾರಿ ಹಾಗೂ ಲಖಿಸರೈ ನಿಲ್ದಾಣದ ನಡುವೆ ಚೂಪಾದ ವಸ್ತುವಿನಿಂದ ಮಿಲಿಂದ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಿಲಿಂದ್ ಸ್ವತಃ ತಾವೇ ಲಖಿಸರೈ ರೈಲ್ವೆ ಸ್ಟೇಷನ್ ಬಳಿಯಿರುವ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅಧಿಕ ರಕ್ತಸ್ರಾವದಿಂದ ಮಿಲಿಂದ್ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.


ಈ ಘಟನೆಯಿಂದ ಕೋಪಗೊಂಡ ಮಿಲಿಂದ್ ಕುಟುಂಬದವರು, ಬ್ಯಾಂಕ್ ಸಿಬ್ಬಂದಿ ಹಾಗೂ ಸ್ಥಳೀಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಪ್ರಕರಣವನ್ನು ಉನ್ನತ ಅಧಿಕಾರಿಗಳಿಗೆ ನೀಡಲಾಗುವುದು ಹಾಗೂ ಈ ಘಟನೆ ವೇಳೆ ರೈಲಿನಲ್ಲಿ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಲಖಿಸರೈ ಜಿಲ್ಲಾ ಪೊಲೀಸ್ ಅಧಿಕಾರಿ ಮನೀಶ್ ಕುಮಾರ್ ಅವರು ಮಿಲಿಂದ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *