ಕುರುಕ್ಷೇತ್ರಕ್ಕೆ ಧ್ವನಿ ಕೊಟ್ಟ ಅಭಿಮನ್ಯು ನಿಖಿಲ್

ಬೆಂಗಳೂರು: ಬಹುಕೋಟಿ ವೆಚ್ಚದ ಪೌರಾಣಿಕ ಚಿತ್ರ ಕುರುಕ್ಷೇತ್ರದಲ್ಲಿ ಅಭಿಮನ್ಯುವಿನ ಪಾತ್ರ ಮಾಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಇಂದು ಆಕಾಶ್ ಸ್ಟುಡಿಯೋದಲ್ಲಿ ವಾಯ್ಸ್ ಡಬ್ ಮಾಡಿದ್ದಾರೆ.

ಈ ಹಿಂದೆ ನಿಖಿಲ್‍ಗೆ ಅವರಿಗೆ ಬೇರೆ ಡಬ್ಬಿಂಗ್ ಕಲಾವಿದರಿಂದ ಧ್ವನಿ ಕೊಡಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸ್ವತಃ ನಿಖಿಲ್ ಅವರೇ ಈಗ ವಾಯ್ಸ್ ಡಬ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಅವರು ಕುರುಕ್ಷೇತ್ರ ಸಿನಿಮಾದ ಟ್ರೈಲರ್ ನೋಡಿದ ಮೇಲೆ ಡಬ್ಬಿಂಗ್ ಮಾಡಬೇಕು ಎಂದು ಇಂದು ಬಂದಿದ್ದೇನೆ. ಸಿನಿಮಾವನ್ನು ತಂದೆ ಮತ್ತು ತಾತ ಒಟ್ಟಿಗೆ ಸೇರಿ ಸಿನಿಮಾ ನೋಡುತ್ತೇವೆ ಎಂದಿದ್ದಾರೆ. ಚುನಾವಣೆ ಕೆಲಸದಲ್ಲಿ ಬ್ಯುಸಿಯಾಗಿರೋದ್ರಿಂದ ಡಬ್ಬಿಂಗ್ ಮಾಡಲು ಆಗಲಿಲ್ಲ ಎಂದು ತಿಳಿಸಿದರು.

ಇದೇ ವೇಳೆ ರಾಜಕೀಯ ಪರಿಸ್ಥಿತಿಗಳಿಂದ ಮಂಡ್ಯದಲ್ಲಿ ಮನೆ ಮಾಡಲು ಅಗಲಿಲ್ಲ ಮುಂದಿನ ದಿನಗಳಲ್ಲಿ ಮನೆ ಮಾಡುತ್ತೇನೆ. ದ್ವೇಷದ ರಾಜಕಾರಣ ಮಾಡುವುದಿಲ್ಲ. ಚುನಾವಣೆ ನಡೆದ ನಂತರ ಅಭಿ ಜೊತೆ ಮೆಸೇಜ್ ಮಾಡಿ ಮಾತನಾಡಿದ್ದೇನೆ. ಮುಂದೆ ಪಕ್ಷ ಸಂಘಟಿಸುತ್ತೇನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *