ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಸಫಾರಿ ಸೇವೆ ಸ್ಥಳಾಂತರ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಸೇವೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಮುಂದಿನ ತಿಂಗಳು ಜೂನ್ 2 ರಿಂದ ಸಫಾರಿ ಜಾಗ ಬದಲಾವಣೆ ಆಗಲಿದೆ. ಬಂಡಿಪುರದಿಂದ ಮೇಲುಕಾಮನಹಳ್ಳಿಗೆ ಸ್ಥಳಾಂತರ ಮಾಡಲಾಗುತ್ತಿದ್ದು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಮೇಲುಕಾಮನಹಳ್ಳಿ ಬರುತ್ತದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ.

ಬಂಡೀಪುರದ ಕಾಡಿನ ಮಧ್ಯದಲ್ಲಿ ಹುಲಿಸಂರಕ್ಷಿತ ಪ್ರದೇಶದ ಸಫಾರಿ ಸೇವೆ ಇತ್ತು. ಇದರಿಂದ ಸಫಾರಿ ಮಾಡುವ ನೆಪದಲ್ಲಿ ಪ್ರವಾಸಿಗರು ಬಂದು ವಾಹನಗಳನ್ನು ಅತೀ ಹೆಚ್ಚಾಗಿ ಪಾರ್ಕಿಂಗ್ ಮಾಡುತ್ತಿದ್ದರು. ಇದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿತ್ತು. ಇನ್ನೊಂದೆಡೆ ಪ್ರವಾಸಿಗರು ತಾವು ತಂದಿದ್ದ ಆಹಾರವನ್ನು ಪ್ರಾಣಿಗಳಿಗೆ ಎಸೆಯುವ ಮೂಲಕ ತೊಂದರೆ ಕೊಡುತ್ತಿದ್ದರು.

ಅಷ್ಟೇ ಅಲ್ಲದೇ ಬಂಡೀಪುರದಲ್ಲಿ ಪ್ರಸ್ತುತ ಖಾಸಗಿ ವ್ಯಕ್ತಿಗಳು ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಸಫಾರಿ ಮಾಡುತ್ತಿದ್ದರು. ಇದಕ್ಕೆಲ್ಲ ನಿರ್ಬಂಧ ಹಾಕಲು ರಾಷ್ಟ್ರೀಯ ಹೆದ್ದಾರಿ 181ರ ಮಾರ್ಗದಲ್ಲಿರುವ ವಿಶೇಷ ಹುಲಿ ಸಂರಕ್ಷಣಾದಳ ಕ್ಯಾಂಪಸ್‍ಗೆ ಸ್ಥಳಾಂತರ ಮಾಡಲಾಗುತ್ತಿದೆ.

Comments

Leave a Reply

Your email address will not be published. Required fields are marked *