ದೇವರ ಗುಡಿಯ ಕಟ್ಟೆ ಮೇಲೆ ಮಗು ಬಿಟ್ಟು ಕಣ್ಮರೆಯಾದ ತಾಯಿ

ಬಾಗಲಕೋಟೆ: ತಾಯಿಯೊಬ್ಬಳು ತಾನೇ ಹೆತ್ತ ನವಜಾತ ಶಿಶುವನ್ನು ಗುಡಿಯೊಂದರ ಕಟ್ಟೆಯ ಮೇಲಿಟ್ಟು ಕಣ್ಮರೆಯಾಗಿರೋ ಕರುಣಾಜನಕ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಎಸ್.ಕೆ ಕಲ್ಲಾಪೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಜಮೀನಿಗೆ ಹೋಗುವ ದಾರಿಯ ಮಧ್ಯೆ ಒಂದು ಶಿವರಾಯಪ್ಪಜ್ಜನ ಗುಡಿ ಇದೆ. ಆ ಗುಡಿಯ ಕಟ್ಟೆಯ ಮೇಲೆ ಆಗ ತಾನೆ ಹುಟ್ಟಿದ ಹೆಣ್ಣು ಮಗುವನ್ನು ಬಿಟ್ಟು ತಾಯಿ ಹೊರಟು ಹೋಗಿದ್ದಾಳೆ. ಅದೇ ದಾರಿಯಲ್ಲಿ ಗ್ರಾಮದ ಸದಾಶಿವಪ್ಪ ಎಂಬುವರು ಬರುವಾಗ ಮಗುವಿನ ಅಳುವಿನ ಸದ್ದು ಕೇಳಿಸಿದೆ. ನಂತರ ಶಬ್ಧ ಬರುತ್ತಿದ್ದ ಕಡೆ ಬಂದು ನೋಡಿದಾಗ ಹೆಣ್ಣು ಶಿಶು ಪತ್ತೆಯಾಗಿದೆ.

ಕೂಡಲೇ ಗ್ರಾಮಸ್ಥರು ಸೇರಿ ಮಗುವಿನ ಆರೈಕೆ ಮಾಡಿದ್ದಾರೆ. ಇದಾದ ಬಳಿಕ ಮಗುವನ್ನು ಸಮೀಪದ ಕೆರೂರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎರಡೂವರೆ ತೂಕ ಹೊಂದಿರುವ ಹೆಣ್ಣು ಮಗು ಆರೋಗ್ಯವಾಗಿದ್ದು, ನಡುದಾರಿಯಲ್ಲಿ ಮಗುವನ್ನು ಬಿಟ್ಟು ಹೋದ ತಾಯಿಯ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *