ನಾಲ್ಕು ಕಾಲಿನ ಮಗುವಿನ ಆಪರೇಷನ್ ಸಕ್ಸಸ್ – ವೈದ್ಯಲೋಕದ ಅಚ್ಚರಿ ಮೆಟ್ಟಿನಿಂತ ನಾರಾಯಣ ಡಾಕ್ಟರ್ಸ್

– ವೈದ್ಯರಿಗೆ ಹೆತ್ತವರ ಕೃತಜ್ಞತೆ

ಬೆಂಗಳೂರು: ವೈದ್ಯಲೋಕಕ್ಕೆ ಅಚ್ಚರಿ ಎಂಬಂತೆ ಕಳೆದ ತಿಂಗಳ 21ರಂದು ರಾಯಚೂರಿನಲ್ಲಿ ಜನಿಸಿದ್ದ ನಾಲ್ಕು ಕಾಲಿನ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್‍ಸಿಟಿ ವೈದ್ಯರು ಯಶಸ್ವಿಯಾಗಿದ್ದಾರೆ. ರಾಯಚೂರಿನ ಪುಲದಿನ್ನಿ ಗ್ರಾಮದ ಲಲಿತಾ-ಚೆನ್ನಬಸಪ್ಪ ದಂಪತಿಗೆ ಈ ಮಗು ಜನಿಸಿದ್ದು ಕಳೆದ ತಿಂಗಳ 24 ರಂದು ನಾರಾಯಣ ಹೆಲ್ತ್‍ಸಿಟಿಗೆ ದಾಖಲಿಸಲಾಗಿತ್ತು.

ಪ್ರಕರಣವನ್ನ ವೈದ್ಯರಾದ ಡಾ. ಜೋಸೆಪ್ ಹಾಗೂ ಡಾ. ಅಕ್ರೂನ್ ಡಿ ಕ್ರೂಸ್ ಸವಾಲಾಗಿ ಸ್ವೀಕರಿಸಿದ್ರು. ಹೊಟ್ಟೆ ಭಾಗದ ಮೇಲೆ ಬೆಳೆದಿದ್ದ ಹೆಚ್ಚುವರಿ 2 ಕಾಲನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದು ಮಗು ಆರೋಗ್ಯವಾಗಿದೆ. ಶಸ್ತ್ರ ಚಿಕಿತ್ಸೆಯ ಮಗುವಿನ ಹೊಟ್ಟೆಯ ಮೇಲೆ ಸ್ವಲ್ಪ ಗಾಯದ ಕಲೆಯಿದ್ದು, ಸದ್ಯ ಮಗು ಐಸಿಯುವಿನಲ್ಲಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಪೋಷಕರಿಗೆ ನೀಡಲಾಗುವುದು ಅಂತ ಹಿರಿಯ ವೈದ್ಯ ಡಾ. ಸಂಜಯ್ ರಾವ್ ಹೇಳಿದ್ದಾರೆ.

ಇನ್ನು, ಲಲಿತಾ-ಚನ್ನಬಸಪ್ಪ ದಂಪತಿ ಮೊಗದಲ್ಲಿ ಸಂತಸ ಮೂಡಿದ್ದು, ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹುಟ್ಟುತ್ತಲೇ ನಾಲ್ಕು ಕಾಲುಗಳ ಹೊಂದಿ ವಿಚಿತ್ರವಾಗಿದ್ದ ಗಂಡು ಮಗು ಇನ್ನು ಮುಂದೆ ಎಲ್ಲರಂತೆ ಬದುಕಲಿದೆ.

Comments

Leave a Reply

Your email address will not be published. Required fields are marked *