ಅಪಘಾತವಾಗಿ ಮೃತಪಟ್ಟ ತಾಯಿಮಂಗದ ಹೊಟ್ಟೆಯಿಂದ ಹೊರಬಂದ ಮರಿ- ಕರುಳ ಬಳ್ಳಿ ಕತ್ತರಿಸಿ ರಕ್ಷಣೆ

ಉಡುಪಿ: ಅಪಘಾತದಲ್ಲಿ ಮೃತಪಟ್ಟಿದ್ದ ತಾಯಿ ಮಂಗನ ಹೊಟ್ಟೆಯಿಂದ ಹೊರಬಂದಿದ್ದ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ನಡೆದಿದೆ.

ಉಡುಪಿ ಸಮೀಪದ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ಅಪರಿಚಿತ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿದ ಮಂಗ ಸಾವನ್ನಪ್ಪಿತ್ತು. ಈ ವೇಳೆ ಗರ್ಭಿಣಿ ಮಂಗದ ಹೊಟ್ಟೆಯಲ್ಲಿದ್ದ ಮರಿ ಹೊರಗೆ ಎಸೆಯಲ್ಪಟ್ಟು ಸಾವಿನಂಚಿನಲ್ಲಿ ಸಿಲುಕಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಮಂಗದ ಮರಿಯ ಕರುಳ ಬಳ್ಳಿಯನ್ನು ಕತ್ತರಿಸಿ ಮರಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅಲೆವೂರು ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ಹಾಗೂ ರಂಜಿತ್ ಎಂಬವರಿಬ್ಬರು ಮರಿ ಮಂಗದ ರಕ್ಷಣೆ ಮಾಡಿದ್ದಾರೆ. ನಂತರ ತಾಯಿ ಮಂಗವನ್ನು ಅಲ್ಲೇ ಸಮೀಪ ಮಣ್ಣು ಮಾಡಿದ್ದಾರೆ. ಮರಿ ಮಂಗವನ್ನು ರಂಜಿತ್ ತಮ್ಮ ಮನೆಗೆ ಕೊಂಡೊಯ್ದು ಆರೈಕೆ ಮಾಡಿದ್ದಾರೆ. ನಂತರ ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಪಂಚಾಯತ್ ಅಧ್ಯಕ್ಷರು ಹಾಗೂ ಸ್ಥಳೀಯ ವ್ಯಕ್ತಿ ಮೂಕ ಪ್ರಾಣಿಯ ಪ್ರಾಣ ಉಳಿಸಿದ್ದಕ್ಕೆ ಶ್ಲಾಘನೆಗೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *