ಕಾಡಾನೆ ಹಿಂಡಿನಿಂದ ಬೇರ್ಪಟ್ಟ 6 ತಿಂಗಳ ಆನೆಮರಿ ರಕ್ಷಣೆ

ಬೆಂಗಳೂರು/ಚಿತ್ರದುರ್ಗ: ಕಾಡಾನೆಗಳ ಹಿಂಡಿನಿಂದ ಬೆರ್ಪಟ್ಟಿದ್ದ ಮರಿ ಆನೆಯೊಂದನ್ನು ರಕ್ಷಣೆ ಮಾಡಲಾಗಿದೆ.

ತಮಿಳುನಾಡಿನ ಡೆಂಕಣಿಕೋಟೆ ಬಳಿಯ ಅಯ್ಯೂರು ಬಳಿ 6 ತಿಂಗಳ ಆನೆ ಮರಿ ಪತ್ತೆಯಾಗಿತ್ತು. ಎರಡು ದಿನಗಳ ಹಿಂದೆ ಆನೆಗಳ ಹಿಂಡಿನಿಂದ ಮರಿ ಆನೆ ತಪ್ಪಿಹೋಗಿತ್ತು.

ಇದೀಗ ಆನೆಯನ್ನ ರಕ್ಷಣೆ ಮಾಡಲಾಗಿದೆ. ಸಣ್ಣ ಪುಟ್ಟ ಗಾಯವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆಮರಿಗೆ ಚಿಕಿತ್ಸೆ ನೀಡಿದ್ದಾರೆ. ಮರಿಯನ್ನ ಹಿಂಡಿನ ಜೊತೆ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಸದ್ಯ 6 ತಿಂಗಳ ಹೆಣ್ಣಾನೆ ಮರಿ ಅರಣ್ಯ ಇಲಾಖೆ ವಶದಲ್ಲಿದೆ.

ಅತ್ತ ವಾಣಿವಿಲಾಸ ಜಲಾಶಯದ ಹಿನ್ನೀರಿನಲ್ಲಿ ಎರಡು ಆನೆ ಪ್ರತ್ಯಕ್ಷವಾಗಿವೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ವ್ಯಾಪ್ತಿಯಲ್ಲಿರುವ ಆನೆಗಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳನ್ನು ಅರಣ್ಯದತ್ತ ಓಡಿಸುತ್ತಿದ್ದಾರೆ. ಮೇ 28ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೌಡನಹಳ್ಳಿ ಬಳಿ ಆನೆಗಳು ಕಾಣಿಸಿಕೊಂಡಿದ್ದವು.

https://www.youtube.com/watch?v=cHm0dTUYI60&feature=youtu.be

Comments

Leave a Reply

Your email address will not be published. Required fields are marked *