ಕಡಲೆಕಾಳಿನಿಂದ 6 ತಿಂಗಳ ಕಂದಮ್ಮ ಸಾವು

ಚಿತ್ರದುರ್ಗ: ಮಕ್ಕಳ ಆರೈಕೆಯಲ್ಲಿ ಕೊಂಚ ಯಾಮಾರಿದ್ರೂ ಪ್ರಾಣವೇ ಕಳೆಕೊಳ್ಳಬೇಕಾಗುತ್ತೆ. ಇಂತಹುದೇ ಘಟನೆ ಚಿತ್ರದುರ್ಗದ ಕಕ್ಕೆರೆ ಗ್ರಾಮದಲ್ಲಿ ನಡೆದಿದೆ.

ಆಕಸ್ಮಿಕವಾಗಿ ಕಡಲೆಕಾಳು ನುಂಗಿದ ಬಾಲಕನಿಗೆ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. 1 ವರ್ಷ 5 ತಿಂಗಳ ಸೃಜನ್ ಮೃತ ಬಾಲಕ. ಈತ ಗ್ರಾಮದ ಅಂಬಿಕಾ ಮತ್ತು ಪಾಥಲಿಂಗಪ್ಪ ದಂಪತಿಯ ಮಗ.

ಕಡಲೆಕಾಳು ತಿಂದು ಉಸಿರುಗಟ್ಟಿ ಒದ್ಡಾಡುತಿದ್ದ ಮಗುವನ್ನ ಗ್ರಾಮದಿಂದ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಕ್ಕೆರೆ ಗ್ರಾಮದಿಂದ ಚಿತ್ರದುರ್ಗ ನಗರಕ್ಕೆ ಸುಮಾರು 30 ಕಿ.ಮೀ ಅಂತರವಿದೆ. ಸ್ಥಳೀಯವಾಗಿ ಯಾವುದೇ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಇಲ್ಲದೇ ಇರುವುದೇ ಮಗುವಿನ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *