ಅಪರಿಚಿತ ವಾಹನ ಡಿಕ್ಕಿಯಾಗಿ ಮರಿಚಿರತೆ ಬಲಿ- ಕಂದನನ್ನು ಕಳೆದುಕೊಂಡು, ಗಾಯಗೊಂಡ ತಾಯಿ ಚಿರತೆಯ ರೋಧನೆ

ತುಮಕೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಚಿರತೆ ಮರಿಯೊಂದು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ನಡೆದಿದೆ.

ಚಿರತೆ ಹಾಗೂ ಅದರ ಮರಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮರಿ ಸ್ಥಳದಲ್ಲಿಯೇ ಸಾವನಪ್ಪಿದ್ದು, ತಾಯಿ ಚಿರತೆಯೂ ಕೂಡಾ ಗಾಯಗೊಂಡು ರಸ್ತೆಯ ಪಕ್ಕದಲ್ಲೇ ಬಿದ್ದಿದೆ.

ಈ ಚಿರತೆಯನ್ನು ಕಾಪಾಡಲೆಂದು ಹೋದಾಗ ಅದು ನೋವಿನಿಂದ ಚೀರಾಡುತ್ತಿತ್ತು. ಈ ದೃಶ್ಯ ನೋಡುಗರಲ್ಲಿ ಮರುಕ ಹುಟ್ಟಿಸಿದೆ.

ವಿಷಯ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಹಾಗೂ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡಿರುವ ತಾಯಿ ಚಿರತೆಗೆ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *