ಬಿಎಸ್‍ವೈ ಆಫರ್ ತಿರಸ್ಕರಿಸಿದ್ರು ಚಿಮೂ

ಬೆಂಗಳೂರು: ಸಂಶೋಧಕ, ಇತಿಹಾಸಕಾರ ಚಿದಾನಂದ ಮೂರ್ತಿ ಈ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಆಫರ್ ತಿರಸ್ಕರಿಸಿದ್ದರು.

ಸಂಶೋಧಕರಾಗಿ, ಇತಿಹಾಸಕಾರಾಗಿ ಚಿಮೂ ಸಾಧನೆ ಅಪಾರ. ಅಷ್ಟೆಲ್ಲ ಸಾಧನೆ ಮಾಡಿದ್ರು ಚಿಮೂ ಅವರು ಸರಳವಾಗಿ ಬದುಕಿದ್ದರು. ಹಿಂದುತ್ವ, ಕನ್ನಡದ ಅಸ್ಮಿತೆಗಾಗಿ ಹೋರಾಡುತ್ತಿದ್ದ ಚಿಮೂ ಅವರಿಗೆ ಸಿಎಂ ಬಿಎಸ್ ವೈ ಸೇರಿದಂತೆ ರಾಜಕೀಯ ಮುಖಂಡರ ಜೊತೆ ಒಡನಾಟವಿತ್ತು. ಆದರೆ ಅದನ್ನು ಅವರ ಸ್ವಾರ್ಥಕ್ಕೆ ಬಳಸಿಕೊಂಡಿರಲಿಲ್ಲ. ಈ ಹಿಂದೆ ವಿಧಾನ ಪರಿಷತ್ ಸ್ಥಾನ ಕೊಡ್ತೀನಿ ಬನ್ನಿ ಎಂದು ಯಡಿಯೂರಪ್ಪನವರು ಆಫರ್ ನೀಡಿದ್ದರಂತೆ ಆದರೆ ರಾಜಕೀಯ ನನಗೆ ಒಗ್ಗಲ್ಲ ಅಂತಾ ಒಂದೇ ಬಾರಿಗೆ ಆಫರ್ ತಿರಸ್ಕರಿಸಿದ್ದರು.

ಇಂದು ಚಿಮೂ ಅವರ ಅಂತಿಮ ದರ್ಶನ ಪಡೆದ ಸಿಎಂ ಅವರ ಜೊತೆಗಿನ ಒಡನಾಟವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

Comments

Leave a Reply

Your email address will not be published. Required fields are marked *