ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ – 10 ವರ್ಷದ ಬಾಲಕಿ ಪಾರು

ರಾಮನಗರ: ಒಂದೇ ಕುಟುಂಬದ 4 ಮಂದಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಸೋಲೂರು ಬಳಿಯ ದಮ್ಮನಕಟ್ಟೆಯಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 10 ವರ್ಷದ ಬಾಲಕಿ ಬದುಕುಳಿದಿದ್ದಾಳೆ. ಸಿದ್ದಮ್ಮ (55), ಸುಮಿತ್ರಾ (30), ಹನುಮಂತರಾಜು (35) ಮೃತರು. ಕೀರ್ತನಾ (10) ಅಪಾಯದಿಂದ ಪಾರಾದ ಬಾಲಕಿ. ಕುಟುಂಬ ಸದಸ್ಯ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ಸದ್ಯ ಮೃತದೇಹಗಳನ್ನು ಬೆಂಗಳೂರಿನ ಆರ್.ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಮಹಿಳೆಗೆ ಮರ್ಮಾಂಗ ತೋರಿಸಿದ ಹೆಡ್ ಕಾನ್ಸ್ಟೇಬಲ್ ಅಮಾನತು

Comments

Leave a Reply

Your email address will not be published. Required fields are marked *