ಹಾಡಹಗಲೇ ಮಾರಕಾಸ್ತ್ರಗಳಿಂದ ರೇಷ್ಮೆ ವ್ಯಾಪಾರಿ ಮೇಲೆ ಅಟ್ಯಾಕ್ – ಹೆಬ್ಬೆರಳು ಕಟ್

ಚಿಕ್ಕಬಳ್ಳಾಪುರ: ಹಾಡಹಗಲೇ ರೇಷ್ಮೆ ವ್ಯಾಪಾರಿಯ ಬೈಕ್ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ, ರೇಷ್ಮೆ ವ್ಯಾಪಾರಿಯ ಎಡಗೈನ ಹೆಬ್ಬೆರಳು ಸಂಪೂರ್ಣ ಕಟ್ ಮಾಡಿದ್ದಾರೆ. ಅದೃಷ್ಟವಶಾತ್ ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ವ್ಯಾಪಾರಿ ಪ್ರಾಣ ಉಳಿಸಿಕೊಂಡಿದ್ದಾನೆ.

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರೇಷ್ಮೆ ವ್ಯಾಪಾರಿ ಫೈರೋಜ್‍ನ ಬೈಕ್ ಅನ್ನು ಹಿಂಬಾಲಿಸಿಕೊಂಡು ಮತ್ತೊಂದು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಂದಿದ್ದಾರೆ. ಈ ವೇಳೆ ಅಜಾದ್ ನಗರದಲ್ಲಿ ಫೈರೋಜ್ ಮೇಲೆ ಲಾಂಗ್‍ನಿಂದ ಏಕಾಏಕಿ ಕಿಡಿಗೇಡಿಗಳು ಅಟ್ಯಾಕ್ ಮಾಡಿದ್ದಾರೆ. ಆದರೆ ಅದೃಷ್ಟವಶಾತ್ ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ಪರಾರಿಯಾದ ಫೈರೋಜ್ ಜೀವ ಉಳಿಸಿಕೊಂಡಿದ್ದಾನೆ. ಇದನ್ನೂ ಓದಿ: ಭಟ್ಕಳದಲ್ಲಿ ಗುಡ್ಡ ಕುಸಿತ – ನಾಲ್ವರು ಸಾವು, ಮೂವರ ಶವ ಹೊರತೆಗೆದ ರಕ್ಷಣಾ ಸಿಬ್ಬಂದಿ

ಘಟನೆಯಲ್ಲಿ ಫೈರೋಜ್ ಹೆಬ್ಬೆರೆಳು ಕಟ್ ಆಗಿದ್ದು, ಹೆಬ್ಬೆರಳು ಜೋಡಣೆ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು, ಚಪ್ಪಲಿಗಳು ಹಾಗೂ ದುಷ್ಕರ್ಮಿಗಳ ಸ್ಟಾರ್ ಸಿಟಿ ಬೈಕ್ ಪತ್ತೆಯಾಗಿದ್ದು, ಬೈಕ್ ವಶಪಡಿಸಿಕೊಂಡಿರುವ ಪೊಲೀಸರು ಇದೀಗ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕಾಗದ ರಹಿತವಾದ ಕೇರಳದ 3 ಕೋರ್ಟ್‌ – ಆ.1ರಿಂದ ಕೇರಳ ಹೈಕೋರ್ಟ್‌ನಲ್ಲೂ ಚಾಲನೆ

ಕಳೆದ ಒಂದೂವರೆ ವರ್ಷದ ಹಿಂದೆ ಶಿಡ್ಲಘಟ್ಟ ನಗರ ಠಾಣೆಯ ಎದುರು ಹಳೇ ದ್ವೇಷದ ಹಿನ್ನೆಲೆ ಅಮ್ಜದ್ ಎಂಬಾತನನ್ನು ಖಲಂಧರ್ ಎಂಬಾತ ಕೊಲೆ ಮಾಡಿದ್ದ. ಇದೀಗ ದಾಳಿಗೆ ಒಳಗಾದ ಫೈರೋಜ್ ಕೊಲೆಯಾಗಿದ್ದ ಅಮ್ಜದ್‍ನ ಇಬ್ಬರೂ ಸ್ನೇಹಿತರಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗೆ ಇರುವ ಖಲಂಧರ್‌ನೇ ಈ ಕೃತ್ಯ ಮಾಡಿಸಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *