ಸಂವಿಧಾನದ ಮೇಲಿನ ಚರ್ಚೆ ಪೂರ್ಣ- ಸದನದಲ್ಲಿ ಸ್ಪೀಕರ್ ಕಣ್ಣೀರು

ಬೆಂಗಳೂರು: ವಿಧಾನಸಭೆಯಲ್ಲಿ ನಡೆಯುತ್ತಿದ್ದ ಸಂವಿಧಾನ ಮೇಲಿನ ಚರ್ಚೆ ಪೂರ್ಣಗೊಂಡಿದೆ. ಸಂವಿಧಾನದ 70ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂವಿಧಾನದ ಚರ್ಚೆ ಏರ್ಪಡಿಸಿದ್ರು. ಅಂತಿಮ ದಿನವಾದ ಇಂದು ಚರ್ಚೆ ಯಶಸ್ವಿಯಾಗಿ ಪೂರ್ಣಗೊಂಡಿದ್ದಕ್ಕೆ ಸ್ಪೀಕರ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

ಅಂದಹಾಗೆ ಒಟ್ಟು 7 ದಿನಗಳ ಕಾಲ 28 ಗಂಟೆ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆ ನಡೆಯಿತು. ಸುಮಾರು 48 ಶಾಸಕರು ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ರು. ಸಂವಿಧಾನ ಮೇಲಿನ ಚರ್ಚೆಯ ಅಂತಿಮ ದಿನವಾದ ಇಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದ್ರು. ಸಿದ್ದರಾಮಯ್ಯ ಮಾತನಾಡುವಾಗ ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವಕ್ಕೆ ಮಾರಕ. ಷೆಡ್ಯೂಲ್ 10 ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಯಾರೇ ಪಕ್ಷಾಂತರ ಮಾಡಿದ್ರೂ ತಪ್ಪು. ನಾನು ಪಕ್ಷಾಂತರ ಮಾಡಲಿಲ್ಲ. ನನ್ನ ಉಚ್ಛಾಟನೆ ಮಾಡಿದ್ರು. ಹಾಗಾಗಿ ನಾನು ಕಾಂಗ್ರೆಸ್ ಸೇರಬೇಕಾಯ್ತು ಅಂತ ಹೇಳಿದ್ರು.

ಸಂವಿಧಾನ ಮೇಲಿನ ಚರ್ಚೆಯ ಒಟ್ಟಾರೆ ನಿರ್ಣಯವನ್ನು ಸ್ಪೀಕರ್ ಓದಿದ್ರು. ಸಂವಿಧಾನದ ಮೇಲಿನ ಚರ್ಚೆಯ ಎಲ್ಲ ಅಂಶಗಳನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಸಭಾ ಸ್ಪೀಕರ್ ಅವರಿಗೆ ಕಳುಹಿಸಿಕೊಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಹೇಳಿದ್ರು. ಇದೇ ವೇಳೆ ಸಂವಿಧಾನ ಮೇಲಿನ ಚರ್ಚೆಯ ಸಾರಾಂಶ ಓದುವಾಗ ಭಾವುಕರಾಗಿ ಪೀಠದ ಮೇಲಿಯೇ ಸ್ಪೀಕರ್ ಕಣ್ಣೀರು ಹಾಕಿದ್ರು. ಬಳಿಕ ರಮೇಶ್ ಕುಮಾರ್, ಬಸವರಾಜ ಬೊಮ್ಮಾಯಿ, ಹೆಚ್.ಕೆ.ಕುಮಾರಸ್ವಾಮಿ ಅವರು ಸ್ಪೀಕರ್ ನಿರ್ಧಾರವನ್ನು ಶ್ಲಾಘಿಸಿದರು.

Comments

Leave a Reply

Your email address will not be published. Required fields are marked *