ದೇವಮಾನವನ ಚುಂಬನಕ್ಕೆ ಮುಗಿಬೀಳ್ತಿದ್ದ ಮಹಿಳೆಯರು!- ಕೊನೆಗೂ ಕಿಸ್ಸಿಂಗ್ ಬಾಬಾ ಅರೆಸ್ಟ್

ದಿಸ್ಪುರ್: ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ, ಮಹಿಳೆಯರನ್ನು ತಬ್ಬಿಕೊಂಡು ಮುತ್ತಿಕ್ಕುತ್ತಿದ್ದ ಸ್ವಯಂಘೋಷಿತ ದೇವ ಮಾನವನೊಬ್ಬನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ರಾಮ್ ಪ್ರಕಾಶ್ ಚೌಹಾಣ್ ಬಂಧಿತ ಆರೋಪಿ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಭೂರಾಲ್ತುಪ್ ಗ್ರಾಮದಲ್ಲಿದ್ದ ರಾಮ್ ಪ್ರಕಾಶ್, ತನ್ ಬಳಿಕೆ ಸಮಸ್ಯೆ ಹೇಳಿಕೊಂಡು ಬರುತ್ತಿದ್ದ ಮಹಿಳೆಯರಿಗೆ ಮುತ್ತಿಕ್ಕುವುದು ಹಾಗೂ ತಬ್ಬಿಕೊಳ್ಳುವುದನ್ನು ಮಾಡುತ್ತಿದ್ದ ಎಂದು ವರದಿಯಾಗಿದೆ.

ತನ್ನ ‘ಚಮತ್ಕಾರ ಚುಂಬನ’ದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಪರಿಹಾರ ಸಿಗುತ್ತವೆ. ತನ್ನ ಚುಂಬನದಲ್ಲಿ ಅದ್ಭುತ ಶಕ್ತಿಯಿದೆ. ಈ ಶಕ್ತಿಯನ್ನು ಭಗವಾನ್ ವಿಷ್ಣುವಿನಿಂದ ವರದಿಂದ ಪಡೆದಿದ್ದಾಗಿ, ಸಹಾಯ ಬಯಸುವ ಮಹಿಳೆಯರಿಗೆ ಹಾಗೂ ವೈವಾಹಿಕ ಸಮಸ್ಯೆ ನಿವಾರಣೆಗೆ ತನ್ನ ಶಕ್ತಿಯನ್ನು ಬಳಸುತ್ತಿರುವುದಾಗಿ ರಾಮ್ ಪ್ರಕಾಶ್ ಹೇಳಿಕೊಂಡಿದ್ದನು. ಈತನ ಮಾತು ಕೇಳಿ ಪ್ರಭಾವಿತರಾಗುತ್ತಿದ್ದ ಮಹಿಳೆಯರು ಚುಂಬಿಸಲು ಅನುಮತಿ ನೀಡುತ್ತಿದ್ದರು.

ರಾಮ್ ಪ್ರಸಾದ್ ಬಗ್ಗೆ ಪ್ರಚಾರ ಮಾಡಲು ಸ್ಥಳೀಯರು ಮುಂದಾಗಿದ್ದರು, ಆದರೆ ಆತ ಅದನ್ನು ತಿರಸ್ಕರಿಸಿದ್ದನು. ಅಲ್ಲದೆ ಆತನಿಗೆ ಮಾಂತ್ರಿಕ ಶಕ್ತಿಯಿದೆ ಎಂದು ನಂಬಿಸಲಾಗಿತ್ತು. ಆತನ ತಾಯಿ, ತಮ್ಮ ಮಗನ ಬಳಿ ಚಿಕಿತ್ಸಕ ಗುಣವಿದೆ ಎಂದು ತನಿಖೆಯ ವೇಳೆ ಹೇಳಿದ್ದಾಳೆ.

ಮೊರಿಗಾಂವ್ ಜಿಲ್ಲೆಯ ಕೆಲವು ಭಾಗದಲ್ಲಿ ವಾಮಾಚಾರಿಗಳ ಸಂಖ್ಯೆ ಹೆಚ್ಚಾಗಿದ್ದು, ತಾವು ವಿಷ್ಣುವಿನ ಅನುಗ್ರಹ ಪಡೆದಿದ್ದಾಗಿ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *