ನಮ್ಮಪ್ಪನ ಬಗ್ಗೆ ನಿಮ್ಮ ತಂದೆ ಬಳಿ ಕೇಳಿ- ಓಮರ್ ಅಬ್ದುಲ್ಲಾಗೆ ಹೆಚ್‍ಡಿಕೆ ಟಾಂಗ್

ಉಡುಪಿ: ನನ್ನ ತಂದೆ ಪ್ರಧಾನಿಯಾಗಿದ್ದಾಗ ಏನು ಮಾಡಿದ್ದಾರೆ ಅಂತ ನಿಮ್ಮ ಅಪ್ಪನ ಬಳಿ ಕೇಳು ಅಂತ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ, ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾಗೆ ಟಾಂಗ್ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸೋಮವಾರದಂದು ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ದೇವೇಗೌಡರು 10 ತಿಂಗಳು ಪ್ರಧಾನಿಯಾಗಿದ್ದಾಗ ಏನು ಕೆಲಸ ಮಾಡಿದ್ದಾರೆ ಎಂದು ಫರೂಕ್ ಅಬ್ದುಲ್ಲಾ ಅವರಲ್ಲಿ ಕೇಳಿ ಎಂದು ಪ್ರತ್ಯುತ್ತರ ನೀಡಿದರು.

ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಅಂದಿನ ಪ್ರಧಾನಿ ದೇವೇಗೌಡರೇ ಕಾರಣ. ಗೌಡ್ರು ಅಧಿಕಾರದಲ್ಲಿದ್ದಾಗ ಅಬ್ದುಲ್ಲಾ ವಿದೇಶಕ್ಕೆ ಹೋಗಿದ್ದರು. ಏನೇನೂ ಗೊತ್ತಿಲ್ಲದವರು ಮಾತನಾಡಿದ್ರೆ ಹೀಗೇ ಆಗೋದು ಎಂದು ಹೇಳಿದರು.

ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಯೋಗೇಶ್ , ಮಹಿಳಾ ವಿಭಾಗದ ಅಧ್ಯಕ್ಷರಾದ ಶಾಲಿನಿ ಶೆಟ್ಟಿ ಕೆಂಚನೂರು ಸೇರಿದಂತೆ ಹತ್ತಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಂಗ್ಲ ಮಾಧ್ಯಮವೊಂದು ಕುಲಭೂಷಣ್ ಜಾಧವ್ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‍ನಿಂದ ಪರ್ವೇಜ್ ಮುಷರಫ್ ಅವರನ್ನ ಸಂದರ್ಶನ ಮಾಡಿತ್ತು. ಇದಕ್ಕೆ ಟ್ವೀಟ್ ಮಾಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಈ ವಿಚಾರದ ಬಗ್ಗೆ ಮಾತನಾಡಲು ಪರ್ವೇಜ್ ಮುಷರಫ್ ಅವರನ್ನ ಕೂರಿಸಿಕೊಳ್ಳಬೇಕಿತ್ತಾ? ಕುಲಭೂಷಣ್ ಬಗ್ಗೆ ಮುಷರಫ್ ಮಾತನಾಡೋದೂ ಒಂದೇ, ಅಭಿವೃದ್ಧಿ ಬಗ್ಗೆ ದೇವೇಗೌಡರನ್ನ ಕೇಳೋದೂ ಒಂದೇ ಅಂತಾ ಅವಹೇಳನ ಮಾಡಿದ್ದರು.

Comments

Leave a Reply

Your email address will not be published. Required fields are marked *