ಹೀರೋ ಹೀರೋಯಿನ್ ಬಗ್ಗೆ ಕೇಳಿದ್ರೆ ಉತ್ತರಿಸ್ತೀನಿ, ಬಫೂನ್ ಬಗ್ಗೆ ಕೇಳಿದ್ರೆ ಹೇಗೆ ಉತ್ತರಿಸಲಿ: ಅನಂತ್‍ಕುಮಾರ್ ಹೆಗ್ಡೆ

ಕಾರವಾರ: ಹೀರೋ ಹೀರೋಯಿನ್ ಬಗ್ಗೆ ಕೇಳಿದರೆ ಉತ್ತರಿಸುತ್ತೇನೆ. ಆದರೆ ಬಫೂನ್ ಬಗ್ಗೆ ಕೇಳಿದರೆ ಯಾಕೆ ಉತ್ತರ ಕೊಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ಲೇವಡಿ ಮಾಡಿದರು.

ಇಂದು ಕಾರವಾರದ ಜಿಲ್ಲಾಪಂಚಾಯತ್ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಟ್ಟಿಗೆ ಹುಟ್ಟಿದವರೇ ಇಂದು ಒಟ್ಟಿಗೆ ಬದುಕುತ್ತಿಲ್ಲ. ಆದರೆ ಕಾದಾಟಕ್ಕಾಗಿ ಹುಟ್ಟಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಗಳು ಎಷ್ಟು ದಿನ ಒಟ್ಟಿಗೆ ಇರುವುದು ಒಂದು ಅದ್ಭುತ. ಆದರೆ ಮುಂದಿನ ದಿನಗಳಲ್ಲಿ ಅವು ಒಟ್ಟಿಗೆ ಇರಲು ಸಾಧ್ಯವೇ ಆಗುವುದಿಲ್ಲ. ಇದು ನೈಸರ್ಗಿಕ ತೀರ್ಮಾನ ಎಂದರು.

ಕಾಂಗ್ರೆಸ್ಸಿನಲ್ಲಿ ಅಥವಾ ಜೆಡಿಎಸ್ ನಲ್ಲಿ ಅತೃಪ್ತರು ಇದ್ದಾರೋ ಎಂದು ನಾವು ಯೋಚಿಸಿಲ್ಲ. ಒಟ್ಟಾರೆ ಈ ಭ್ರಷ್ಟ ಸರ್ಕಾರ ಹೋಗಬೇಕು, ಇದು ನಮ್ಮದಷ್ಟೇ ಅಲ್ಲ ಜನರ ಅಪೇಕ್ಷೆ ಕೂಡಾ ಆಗಿದೆ. ದೇಶ ಕಟ್ಟುವ ಮಾರ್ಗದಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಧನಾತ್ಮಕ ಯೋಚನೆ ಹೊಂದಿರುವವರು ಯಾರೇ ಪಕ್ಷಕ್ಕೆ ಬಂದರೂ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *