ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಬೇಕು: ಅಶೋಕ್ ಗೆಹ್ಲೋಟ್

ನವದೆಹಲಿ: ರಾಹುಲ್ ಗಾಂಧಿ ಅವರು ಕಾಂಗ್ರೆಸ್‍ನ ಮುಖ್ಯಸ್ಥರಾಗಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನವದೆಹಲಿಯಲ್ಲಿ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಕಾಂಗ್ರೆಸ್ ಅನ್ನು ಮುಸ್ಲಿಂ ಪಕ್ಷ ಎಂದು ಪ್ರಚಾರ ಮಾಡಿದೆ. ಆದರೆ ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವುದು ನಮ್ಮ ಮಾರ್ಗವಾಗಿದೆ. ಬಿಜೆಪಿಯು ಚುನಾವಣೆಯ ಸಂದರ್ಭದಲ್ಲಿ ಧರ್ಮದ ವಿಷಯವನ್ನು ಮುಂಚೂಣಿಯಲ್ಲಿ ಇಡುತ್ತದೆ. ಆದರೆ ಹಣದುಬ್ಬರ ಹಾಗೂ ಉದ್ಯೋಗ ಸಮಸ್ಯೆಯನ್ನು ಹಿನ್ನಡೆ ಮಾಡುತ್ತದೆ ಎಂದು ಕಿಡಿಕಾರಿದರು.

2007ರಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿತ್ತು. ಇದರಿಂದಾಗಿ ನಾವು ಪಂಜಾಬ್‍ನಲ್ಲಿ ಜಯ ಸಾಧಿಸಿದೆವು. ಚನ್ನಿ ಮುಖ್ಯಮಂತ್ರಿಯಾದ ನಂತರ ಪರಿಸರವೂ ಅನುಕೂಲಕರವಾಗಿತ್ತು. ಆದರೆ ಆಂತರಿಕ ಸಂಘರ್ಷದಿಂದಾಗಿ ನಾವು ಪಂಜಾಬ್ ಚುನಾವಣೆಯಲ್ಲಿ ಸೋಲನುಭವಿಸಿದೆವು. ಇದು ನಮ್ಮ ತಪ್ಪಾಗಿದೆ ಎಂದರು. ಇದನ್ನೂ ಓದಿ: ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!

ರಾಹುಲ್ ಗಾಂಧಿ ಅವರು ಪಕ್ಷ ಅಧ್ಯಕ್ಷರಾಗಬೇಕು. ಕಳೆದ ಮೂರು ದಶಕಗಳಿಂದ ಗಾಂಧಿ ಕುಟುಂಬದಿಂದ ಯಾರೂ ಪ್ರಧಾನಿ ಅಥವಾ ಮಂತ್ರಿ ಆಗಲಿಲ್ಲ. ಕಾಂಗ್ರೆಸ್‍ನ ಒಗ್ಗಟ್ಟಿಗೆ ಗಾಂಧಿ ಕುಟುಂಬ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ನಿಕಟವಾಗಿ ವೀಕ್ಷಿಸಿದ ಸಭೆಗೆ ಮುಂಚಿತವಾಗಿ, ಪಂಚರಾಜ್ಯ ಚುನಾವಣೆಯಲ್ಲಿ ಭಾರೀ ಸೋಲಿನ ಬಗ್ಗೆ ಚರ್ಚಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ ಅಮಾನತು ಪ್ರಕರಣ – ಸಭಾಪತಿ ಹೊರಟ್ಟಿ ವಿರುದ್ಧ ಪ್ರತಿಭಟನೆ

Comments

Leave a Reply

Your email address will not be published. Required fields are marked *