ಪಾಕಿನಿಂದ ಕದನವಿರಾಮ ಉಲ್ಲಂಘನೆ – ಗುಂಡಿನ ದಾಳಿಗೆ ಓರ್ವ ಸೈನಿಕ ಹುತಾತ್ಮ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸೈನಿಕರ ಮಧ್ಯೆ ಇಂದು ಮಧ್ಯಾಹ್ನ ಗುಂಡಿನ ಚಕಮಕಿ ನಡೆದಿದ್ದು, ಪಾಕ್ ನಡೆಸಿದ ಶೆಲ್ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಇಂದು ಮಧ್ಯಾಹ್ನ ಪಾಕಿಸ್ತಾನ ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ತಂಗ್ಧರ್ ಸೆಕ್ಟರ್‍ನಲ್ಲಿ ಭಾರೀ ಶೆಲ್ ದಾಳಿ ನಡೆಸಿದೆ. ಪಾಕ್ ನಡೆಸಿದ ಶೆಲ್ ದಾಳಿಗೆ ಒರ್ವ ಸೈನಿಕ ಹುತಾತ್ಮರಾಗಿದ್ದಾರೆ. ನಂತರ ಭಾರತೀಯ ಸೈನಿಕರು ಸಹ ಪ್ರತಿ ದಾಳಿ ನಡೆಸಿದ್ದು, ಪಾಕಿನ ಇಬ್ಬರು ಸೈನಿಕರು ಹತರಾಗಿದ್ದಾರೆ.

ಪಾಕ್ ದಾಳಿಗೆ 34 ವರ್ಷದ ಭಾರತೀಯ ಸೈನಿಕ ನಾಯ್ಕ್ ಕ್ರಿಶನ್ ಲಾಲ್ ಅವರು ಸುಂದರ್‍ಬನಿ ಪ್ರದೇಶದಲ್ಲಿ ಹುತಾತ್ಮರಾಗಿದ್ದಾರೆ. ಇವರು ಜಮ್ಮು ಕಾಶ್ಮೀರದ ತೇಹ್ಸಿಲ್ ಅಖ್ನೂರ್ ಜಿಲ್ಲೆಯ ಘಗ್ರಿಯಾಲ್ ಗ್ರಾಮದವರಾಗಿದ್ದಾರೆ. ನಾಯಕ್ ಕ್ರಿಶನ್ ಲಾಲ್ ಅವರು ಧೈರ್ಯಶಾಲಿ, ಹೆಚ್ಚು ಪರಾಕ್ರಮಿ ಮತ್ತು ಪ್ರಾಮಾಣಿಕ ಸೈನಿಕರಾಗಿದ್ದರು. ಅವರ ತ್ಯಾಗ ಹಾಗೂ ಕರ್ತವ್ಯ ನಿಷ್ಠೆಗಾಗಿ ರಾಷ್ಟ್ರ ಅವರಿಗೆ ಚಿರರುಣಿಯಾಗಿರುತ್ತದೆ ಎಂದು ಭಾರತೀಯ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಕೆಣಕಿದ್ದಕ್ಕೆ ನಾವು ಪ್ರತಿದಾಳಿ ನಡೆಸಿದ್ದು, ಪಾಕ್ ಸೈನಿಕರು ಗಂಭೀರ ಗಾಯಗೊಂಡಿದ್ದು, ಸಾವು, ನೋವು ಸಂಭವಿಸಿದೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Comments

Leave a Reply

Your email address will not be published. Required fields are marked *