ನಿನ್ನೆ ಅಮೂಲ್ಯ, ಇಂದು ಆರ್ದ್ರಾ- ಹಿಂದೂ ಸಂಘಟನೆ ಪ್ರತಿಭಟನೆಯಲ್ಲಿ ದೇಶದ್ರೋಹಿಯ ಬಂಧನ

– ಬೆಂಗಳೂರಲ್ಲಿ ಪಾಕ್ ಪಿಶಾಚಿಗಳ ಅಬ್ಬರ

ಬೆಂಗಳೂರು: ಗುರುವಾರ ಅಮೂಲ್ಯಾ ಲಿಯೋನ ವೈರಿ ರಾಷ್ಟ್ರ ಪರ ಘೋಷಣೆ ಕೂಗಿ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾಳೆ. ಇಂದು ಅಮೂಲ್ಯಾಳ ಹೇಳಿಕೆ ಖಂಡಿಸಿ ಹಿಂದೂ ಸಂಘಟನೆ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮತ್ತೊಮ್ಮೆ ಪಾಕ್ ಪ್ರೇಮಿ ಆರ್ದ್ರಾ ಎಂಬ ಯುವತಿಯ ಬಂಧನವಾಗಿದೆ.

ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಅಮೂಲ್ಯಾ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನಾ ಸ್ಥಳಕ್ಕೆ ಮುಕ್ತಿ ಮುಸ್ಲಿಂ, ಮುಕ್ತಿ ಕಾಶ್ಮೀರ್, ಮುಕ್ತಿ ದಲಿತ್ ಕಾರ್ಡ್ ಭಿತ್ತಿಪತ್ರ ಹಿಡಿದು ಬಂದ ಆರ್ದ್ರಾ ಪಾಕ್ ಪರ ಘೋಷಣೆ ಕೂಗಲಾರಂಭಿಸಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆರ್ದ್ರಾಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ದ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳು ದೂರು ದಾಖಲಿಸಿವೆ. ಮುನ್ನೇಚ್ಚರಿಕೆ ಕ್ರಮವಾಗಿ ಆರ್ದ್ರಾಳನ್ನು ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ಇರಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ನಾರಾಯಣ ಎಂಬವರ ಪುತ್ರಿಯಾಗಿರುವ ಆರ್ದ್ರಾ ಆರ್ಕಿಟೆಕ್ ಆಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿವೆ.

Comments

Leave a Reply

Your email address will not be published. Required fields are marked *