‘ಪೆಟ್ರೋಮ್ಯಾಕ್ಸ್’ ಸಿನಿಮಾ ಓಡುತ್ತಿದ್ದರೂ ಸೋಲೊಪ್ಪಿಕೊಂಡ ನಿರ್ದೇಶಕನ ನಡೆಗೆ ಮೆಚ್ಚುಗೆ ಮಹಾಪೂರ

ನೀರ್ ದೋಸೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಗೆ ಕೊಟ್ಟಿರುವ ನಿರ್ದೇಶಕ ವಿಜಯ್ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಸಿನಿಮಾ ಎರಡು ವಾರಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯ ರಾಮ್, ಅರುಣ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಮೂರನೇ ವಾರಕ್ಕೆ ಸಿನಿಮಾ ಕಾಲಿಟ್ಟಿರುವ ಸಂದರ್ಭದಲ್ಲಿ ಏಕಾಏಕಿ ಸೋಲನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ನಿರ್ದೇಶಕರು.

ನಿನ್ನೆಯಷ್ಟೇ ನಿರ್ದೇಶಕ ವಿಜಯ್ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ‘ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ. ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲ. ಹಾಗೆ ನಮ್ಮ ಚಿತ್ರತಂಡದ ಯಾರೊಬ್ಬರೂ ಅಲ್ಲ. ಇದಕ್ಕೆ ಕಾರಣ ನಾನೊಬ್ಬನೇ. ಕ್ಷಮೆ ಇರಲಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನಿರ್ದೇಶಕರು ಹೇಳಿದಂತೆ ಅಪಾರ ಸಂಖ್ಯೆಯಲ್ಲಿ ಈ ಸಿನಿಮಾ ಜನರಿಗೆ ತಲುಪದೇ ಇರಬಹುದು. ಆದರೆ, ತಲುಪಿದವರೆಲ್ಲ ಇಷ್ಟಪಟ್ಟಿದ್ದಾರೆ. ದ್ವಂದ್ವಾರ್ಥದ ಸಂಭಾಷಣೆಯ ಮಧ್ಯೆಯೂ ತಲುಪಬೇಕಾದ ಸಂದೇಶ ತಲುಪಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್

ನಿರ್ದೇಶಕ ವಿಜಯ್ ‍ಪ್ರಸಾದ್ ಈ ರೀತಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸಿನಿಮಾಗಳು ಸೋತರೂ, ನೂರಾರು ಕೋಟಿ ದುಡ್ಡು ಬಂದಿದೆ ಎಂದು ಹೇಳುವ, ತಮ್ಮ ಸಿನಿಮಾ ಸೂಪರ್ ಹಿಟ್ ಆಗಿದೆ ಎಂದು ಬೊಗಳೆ ಬಿಡುವ ನಿರ್ದೇಶಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ದಿನಮಾನದಲ್ಲಿ, ತಮ್ಮ ಸಿನಿಮಾ ತಲುಪಿಲ್ಲ ಎಂದು ಪ್ರಮಾಣಿಕವಾಗಿ ಒಪ್ಪಿಕೊಂಡ ನಿರ್ದೇಶಕರ ನಡೆಯನ್ನು ಬಹುತೇಕರ ಮೆಚ್ಚಿದ್ದಾರೆ. ಮುಂದಿನ ಸಿನಿಮಾ ಚೆನ್ನಾಗಿ ಆಗಲಿ ಎಂದೂ ಹಾರೈಸಿದ್ದಾರೆ.

ಇಂದಿನಿಂದ ನಿರ್ದೇಶಕರು ಅವರ ಮತ್ತೊಂದು ಸಿನಿಮಾ ತೋತಾಪುರಿ ಕೆಲಸದಲ್ಲಿ ತೊಡಗಿಕೊಂಡಿದ್ದಾರಂತೆ. ಅದನ್ನೂ ಅವರು ಪೋಸ್ಟ್ ಮಾಡಿದ್ದಾರೆ. ತೋತಾಪುರಿ ಸಿನಿಮಾ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಎರಡನೇ ಸಿನಿಮಾ. ಇದು ಎರಡು ಭಾಗಗಳಲ್ಲಿ ಮೂಡಿ ಬಂದಿದೆ. ರಿಲೀಸ್ ಆಗಿರುವ ಟ್ರೈಲರ್ ಭರವಸೆ ಮೂಡಿಸಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *