ಪ್ರಧಾನಿಯಾಗಿ ಮಾತನಾಡೋದು ಕಲಿಯಬೇಕು – ಮೋದಿ ವಿರುದ್ಧ ಎಸ್.ಆರ್ ಹಿರೇಮಠ್ ಕಿಡಿ

ಧಾರವಾಡ: ಒಮ್ಮೆ ಪ್ರಧಾನಿಯಾದ ಬಳಿಕ ಅವರು ತಮ್ಮ ಪಕ್ಷ ಬಿಟ್ಟು ದೇಶದ ಪ್ರಧಾನಿಯಾಗಿ ಜವಾಬ್ದಾರಿತನದಿಂದ ಮಾತಾಡುವುದು ಕಲಿಯಬೇಕು. ಬೇಜವಾಬ್ದಾರಿಯಿಂದ ಮಾತನಾಡಿ ಆ ಸ್ಥಾನಕ್ಕೆ ಅವಮಾನ ತರುವ ಕೆಲಸ ಮಾಡಿದ್ದಾರೆ ಅಂತ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಏನೇ ಮಾಡಿದ್ರೂ, ಹೆಂಗೇ ಆದ್ರೂ ನಾವು ಗೆಲ್ತೇವೆ ಅನ್ನೋ ಅಹಂಕಾರವಿತ್ತು. ಆದ್ರೆ ಇದು ಕರ್ನಾಟಕದಲ್ಲಿ ಫಲಿಸಲಿಲ್ಲ. ಇದು ಒಂದು ಉತ್ಕೃಷ್ಟ ಬೆಳವಣಿಗೆಯಾಗಿದೆ. ಎಷ್ಟೋ ಸಲ ಆಗುವ ಅನಾಹುತವನ್ನು ನಿಲ್ಲಿಸುವುದು ಕೂಡ ಒಂದು ಮಹತ್ವದ ಸಾಧನೆ. ಬಿಜೆಪಿಯವರನ್ನು 104ಕ್ಕೆ ಇಳಿಸಿದ್ದಾರೆ ಅಂತ ಹೇಳಿದ್ರು.

ಜಾಣಮರಿ ಅಮಿತ್ ಶಾ ಅವರ ಹಿನ್ನೆಲೆ ನಿಮಗೆ ಗೊತ್ತಿದೆ. ಗುಜರಾತ್ ನ್ಲಿ ಯಾವ ರೀತಿಯ ಬ್ಯಾಗ್ರೌಂಡ್ ಇತ್ತು. ಆ ವ್ಯಕ್ತಿ ಇಂದು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಹಾಗೂ ಇಂದು ಕಾರ್ಯಾಂಗ ಗಂಭೀರ ಸ್ಥಿತಿಯಲ್ಲಿರಲು ಅವರ ಕೈವಾಡವಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರ ಮೇಲೆಯೂ ಪ್ರಭಾವ ಬೀರಿದ್ದಾರೆ ಅಂತ ಲೋಯಾ ಕೊಲೆ ಪ್ರಕರಣದ ಕುರಿತು ಮಾತನಾಡಿದ್ರು.

ಪ್ರಜಾಪ್ರಭುತ್ವದೊಳಗೆ ಯಾವುದೇ ಸ್ಥಾನ ಇರದಂತಹ ವ್ಯಕ್ತಿಗೆ ಕೊಡಬಾರದಂತದ್ದನ್ನು ಸುಪ್ರೀಂ ಕೋರ್ಟ್ ಕೊಟ್ಟಿದೆ. ಹೀಗೆ ಎಲ್ಲವನ್ನು ಬಳಸಿಕೊಂಡು ಶಾ ಗೋವಾ, ಮಣಿಪುರ, ಮೇಘಾಲಯದಲ್ಲಿ ಹೋದರೊ ಅದು ನಮ್ಮ ಪ್ರಜಾಪ್ರಭುತ್ವಕ್ಕೆ ಗಂಭೀರವಾದ ಗಂಡಾಂತರ. ಹೀಗಾಗಿ ಇವರಿಬ್ಬರೂ ವ್ಯಕ್ತಿಗಳನ್ನು ಕರ್ನಾಟಕದಲ್ಲಿ ಸೋಲಿಸಿರುವುದು ಅತೀ ಮಹತ್ವದ ಬೆಳವಣಿಗೆ ಅಂತ ಅವರು ಅಭಿಪ್ರಾಯಿಸಿದ್ರು.

ಹೊಸ ಸರ್ಕಾರ ರಚನೆಯಾಗಲಿದೆ. ಹಿಂದಿನ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿತ್ತು. ರಾಜ್ಯಪಾಲ ವಿ ಆರ್ ವಾಲಾ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಬಿಜೆಪಿಗೆ 15 ದಿನ ಸಮಯಕೊಟ್ಟಿದ್ದು ಪ್ರಜಾಪ್ರಭುತ್ವಕ್ಕೆ ಗಂಡಾಂತರ ತರುವ ಕೆಲಸವಾಗಿದೆ. ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲಾಂದ್ರೆ ರಾಷ್ಟ್ರಪತಿ ಅವರನ್ನು ವಜಾ ಮಾಡಲಿ ಅಂತ ಆಗ್ರಹಿಸಿದ್ರು.

ಸಿದ್ಧರಾಮಯ್ಯ ಸರ್ಕಾರದ 16 ಜನ ಮಂತ್ರಿಗಳು ನೆಲ ಕಚ್ಚಿದ್ದಾರೆ. ಇದರಲ್ಲಿ ಸೋತಿರುವ ಭ್ರಷ್ಟ ಮಂದಿಯನ್ನು ನಾವು ತುಂಬು ಹೃದಯದಿಂದ ಸ್ವಾಗತಿಸಬೇಕು. ವಿನಯ ಕುಲಕರ್ಣಿ, ಈತ ಮಂತ್ರಿ ಅಲ್ಲ ಶಾಸಕನಾಗಿ ಸಾರ್ವಜನಿಕ ಜೀನವದಲ್ಲಿರಲು ಅಯೋಗ್ಯ. ಸಂತೋಷ್ ಲಾಡ್ ಕೂಡ ಮನೆಗೆ ಹೋಗಿದ್ದಾರೆ ಅಂದ್ರು.

Comments

Leave a Reply

Your email address will not be published. Required fields are marked *