ಜೈಪುರ: ಮೊಮ್ಮಗಳು ಹಠ ಹಿಡಿದಿದ್ದಕ್ಕೆ ಸಿಟ್ಟಿಗೆದ್ದ ಅಜ್ಜಿಯೊಬ್ಬಳು ತನ್ನ ಮೊಮ್ಮಗಳನ್ನೇ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಹನುಮಗೃಹ ಪಟ್ಟಣದಲ್ಲಿ ನಡೆದಿದೆ.
ಬುಧವಾರ ಮಗುವೊಂದು ಆಕಸ್ಮಿಕವಾಗಿ ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೃತಪಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಗು ಸಾವಿನ ಅನುಮಾನದ ಮೇರೆಗೆ ಆಕೆಯ ಅಜ್ಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ವಿಚಾರಣೆಗೆ ಒಳಪಡಿಸಿದಾಗ, ಮಗುವಿನ ಅಜ್ಜಿಯು ಸ್ವತಃ ತನ್ನ ಮೊಮ್ಮಗಳನ್ನು ನೀರಿನ ಟ್ಯಾಂಕರ್ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಅಲ್ಲದೇ 4 ವರ್ಷದ ಮಗು ತುಂಬಾ ಹಠಮಾರಿ ಹಾಗೂ ಮೊಂಡುತನದಿಂದ ವರ್ತಿಸಿತ್ತಿತ್ತು. ಎಷ್ಟೇ ಬಾರಿ ಹೇಳಿದರೂ, ಯಾರ ಮಾತನ್ನು ಕೇಳುತ್ತಿರಲಿಲ್ಲ. ಇದರಿಂದ ಸಿಟ್ಟಿಗೆಂದು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಅಧಿಕಾರಿ ವೈಷ್ಣೋಯಿ ತಿಳಿಸಿದರು.
ಘಟನೆ ಸಂಬಂಧ ಅಜ್ಜಿಯ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply