ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ನವದೆಹಲಿ: ಲೋಕಪಾಲ ನೇಮಕ ಮಾಡುವಂತೆ ಒತ್ತಾಯಿಸಿ 81 ವರ್ಷದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಜನವರಿ 30 ರಿಂದ ಉಪವಾಸ ಸತ್ಯಾಗ್ರಹ ಆರಂಭ ಮಾಡುವುದಾಗಿ ಹೇಳಿದ್ದಾರೆ.

ಭ್ರಷ್ಟಚಾರ ವಿರುದ್ಧ ಹೋರಾಟ ಮಾಡಲು ಲೋಕಪಾಲ ಸಂಸ್ಥೆ ಅನಿವಾರ್ಯವಾಗಿದ್ದು, ಕೂಡಲೇ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಕ ಮಾಡಬೇಕು. 2013ರಲ್ಲಿ ಲೋಕಪಾಲ ಮಸೂದೆ ರಚನೆ ಆಗಿದ್ದು, 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಆಡಳಿತವಹಿಸಿಕೊಂಡಿತ್ತು. ಆಗ ಉತ್ತಮ ಆಡಳಿತ ನಿರೀಕ್ಷೆಯಲ್ಲಿದ್ದೇವೂ. ಆದರೆ ಕಳೆದ 5 ವರ್ಷಗಳಲ್ಲಿ ಅವರು ಏನು ಮಾಡಲಿಲ್ಲ. ಆದ್ದರಿಂದ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದೇನೆ. ಮಹಾರಾಷ್ಟ್ರದ ರಾಲೇಗಾವ್ ಸಿದ್ದಿಯಲ್ಲಿ ಸತ್ಯಾಗ್ರಹ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಲೋಕಪಾಲ ನೇಮಕ ಮಾಡುವಂತೆ ಈ ಹಿಂದೆ ಅಣ್ಣಾ ಹಜಾರೆ ಪ್ರಧಾನಿ ಅವರಿಗೆ ಪತ್ರವನ್ನು ಬರೆದಿದ್ದರು. ಅಲ್ಲದೇ ಈ ಹಿಂದೆಯೇ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದ ಹಜಾರೆ ಅವರು ಕೇಂದ್ರ ಸರ್ಕಾರ ಭರವಸೆಯ ಮೇರೆಗೆ ಹಿಂದೆ ಸರಿದ್ದರು. ಆದರೆ ಇನ್ನು ಅವರ ಸುಳ್ಳು ಆಶ್ವಾಸನೆಗಳನ್ನು ನಂಬಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *