ಮಹಾರಾಷ್ಟ್ರ ಸಿಎಂ ಆಗಿ ಎಂದ ಅಭಿಮಾನಿಯ ಮನವಿಗೆ ನಟ ಅನಿಲ್ ಪ್ರತಿಕ್ರಿಯೆ

ಮುಂಬೈ: ವಿಧಾನಸಭಾ ಚುನಾವಣೆ ಮುಗಿದ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಪಕ್ಷದ ನಡುವೆ ಸಿಎಂ ಖುರ್ಚಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಈ ನಡುವೆ ಅಭಿಮಾನಿಯೊಬ್ಬರು ನಟ ಅನಿಲ್ ಕಪೂರ್ ಅವರಿಗೆ ಸಿಎಂ ಆಗುವಂತೆ ಮನವಿ ಮಾಡಿದ್ದಾರೆ. ಅಭಿಮಾನಿಯ ಮನವಿಗೆ ಅನಿಲ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ್ ಗುಪ್ತಾ ಎಂಬವರು ತಮ್ಮ ಟ್ವಿಟ್ಟರಿನಲ್ಲಿ, ಮಹಾರಾಷ್ಟ್ರದಲ್ಲಿ ಎಲ್ಲಿಯವರೆಗೂ ಪೈಪೋಟಿ ನಿಲುವುದಿಲ್ಲವೋ ಅಲ್ಲಿಯವರೆಗೂ ಅನಿಲ್ ಕಪೂರ್ ಸಿಎಂ ಆಗಿರಲಿ. ಚಿತ್ರದಲ್ಲಿ ಅವರು ಒಂದು ದಿನದ ಸಿಎಂ ಆಗಿ ಮಾಡಿರುವ ಕೆಲಸವನ್ನು ಇಡೀ ದೇಶ ನೋಡಿದೆ. ದೇವೇಂದ್ರ ಫಡ್ನವಿಸ್ ಹಾಗೂ ಆದಿತ್ಯ ಠಾಕ್ರೆ ಏನು ಯೋಚಿಸ್ತಿದ್ದೀರಾ? ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ವಿಜಯ್ ತನ್ನ ಟ್ವಿಟ್ಟರಿನಲ್ಲಿ ಬರೆದುಕೊಂಡ ಕೆಲವೇ ನಿಮಿಷಗಳಲ್ಲಿ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಸ್ವತಃ ನಟ ಅನಿಲ್ ಕಪೂರ್ ಅವರೇ ಅಭಿಮಾನಿಯ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನಾಯಕನಾಗಿರುವುದೇ ಉತ್ತಮ” ಎಂದು ಅನಿಲ್ ರೀ-ಟ್ವೀಟ್ ಮಾಡಿದ್ದಾರೆ.

ಅನಿಲ್ ಕಪೂರ್ ಅವರ ಸೆನ್ಸ್ ಆಫ್ ಹ್ಯೂಮರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನಿಲ್ ಕಪೂರ್ ಟ್ವೀಟ್‍ಗೆ ಕೆಲವರು, ಇವರು ಮೊದಲು ನಿರಾಕರಿಸುತ್ತಾರೆ, ಬಳಿಕ ಶಪಥ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ಅತ್ಯುತ್ತಮ ಸಲಹೆ” ಎಂದು ಪ್ರತಿಕ್ರಿಯಿಸಿದ್ದಾರೆ.

2001ರಲ್ಲಿ ಅನಿಲ್ ಕಪೂರ್ ನಟನೆಯ ‘ನಾಯಕ್’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅನಿಲ್ ಕಪೂರ್ ಒಂದು ದಿನದ ಮುಖ್ಯಮಂತ್ರಿ ಆಗಿದ್ದರು. ಚಿತ್ರದಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಲು ಅನಿಲ್ ಫುಲ್ ಜೋಶ್‍ನಲ್ಲಿ ಕೆಲಸ ಮಾಡಿದ್ದರು. ಈ ಚಿತ್ರವನ್ನು ಎಸ್. ಶಂಕರ್ ನಿರ್ದೇಶಿಸಿದ್ದು, ಅನಿಲ್‍ಗೆ ನಾಯಕಿಯಾಗಿ ರಾಣಿ ಮುಖರ್ಜಿ ನಟಿಸಿದ್ದರು.

Comments

Leave a Reply

Your email address will not be published. Required fields are marked *