ಅನುಶ್ರೀಗೆ ಸಿಕ್ತು ಹೊಸ ಬಿರುದು

ಬೆಂಗಳೂರು: ಕಿರುತೆರೆಯಲ್ಲಿ ತಮ್ಮ ನಿರರ್ಗಳ ಮಾತಿನ ಮೂಲಕ ಚಾಪು ಮೂಡಿಸಿರುವ ಕರಾವಳಿ ತೀರದ ಬೆಡಗಿ ಅನುಶ್ರೀ ಅವರಿಗೆ ಹೊಸ ಬಿರುದನ್ನು ನಾದಬ್ರಹ್ಮ, ಸ್ವರದಿಗ್ಗಜ ಹಂಸಲೇಖ ನೀಡಿದ್ದಾರೆ.

ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದ ನಿರೂಪಕಿಯಾಗಿರುವ ಅನುಶ್ರೀ ಎಲ್ಲರ ಅಚ್ಚುಮೆಚ್ಚಿನ ತಾರೆ. ಕಾರ್ಯಕ್ರಮದ ಮಹಾತೀರ್ಪುಗಾರರ ಸ್ಥಾನದಲ್ಲಿರುವ ಹಂಸಲೇಖ ಹೊಸ ಬಿರುದು ನೀಡಿ ಅನುಶ್ರೀ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಮಾತಿನ ಮಲ್ಲಿ, ಚಿನಕುರುಳಿ, ಪಟ್ ಪಟಾಕಿ ಹೀಗೆ ಅನುಶ್ರೀಯವರನ್ನ ಕರೆಯುವುದುಂಟು. ಇದೀಗ ‘ಪ್ರಸಂಗಗೀತ’ ಎಂಬ ಹೊಸ ಕನ್ನಡ ಬಿರುದನ್ನು ಹಂಸಲೇಖ ನೀಡಿದ್ದಾರೆ. ಪ್ರಸಂಗಗೀತ ಬಿರುದು ಪಡೆದ ಅನುಶ್ರೀ ಸಂತೋಷವನ್ನು ವ್ಯಕ್ತಪಡಿಸಿದರು.

ಈ ಶನಿವಾರ ಪ್ರಸಾರವಾದ ಸಂಗೀತ ಕಾರ್ಯಕ್ರಮದ ಆರಂಭದಲ್ಲಿಯೇ ಹಂಸಲೇಖ ಇನ್ನ್ಮುಂದೆ ಪ್ರಸಂಗಗೀತ ಅನುಶ್ರೀ ಎಂದು ಹೇಳಿದರು. ಪರಸಂಗದ ತಿಮ್ಮದ ಅಂದ್ರೆ ಪರರ ಕತೆಗಳನ್ನು ವರ್ಣರಂಜಿತವಾಗಿ ಹೇಳುವ ವ್ಯಕ್ತಿ. ಸಂಗೀತ ಕಾರ್ಯಕ್ರಮದಲ್ಲಿಯೇ ಎಲ್ಲರ ಕತೆಯನ್ನು ಗೀತೆಯ ಮೂಲಕ ಹೇಳುವ ನಿರೂಪಕಿಯನ್ನು ಕನ್ನಡದಲ್ಲಿ ಪ್ರಸಂಗಗೀತ ಎಂದು ಕರೆತಯುತ್ತಾರೆ ಅಂತಾ ಹಂಸಲೇಖ ತಿಳಿಸಿದರು.

ಹೊಸ ಬಿರುದು ಪಡೆದ ಆನುಶ್ರೀ ಚಪ್ಪಾಳೆಯ ಮೂಲಕ ಹಂಸಲೇಖರಿಗೆ ಧನ್ಯವಾದ ಅರ್ಪಿಸಿದರು. ಖುದ್ದು ಮಹಾ ಗುರುಗಳಾದ ಹಂಸಲೇಖ ಅವರು ನನಗೆ ಬಿರುದು ನೀಡಿದ್ದು, ಮುಂದಿನ ಸಂಚಿಕೆಯಿಂದ ನನ್ನ ಸಂಭಾವನೆಯಲ್ಲಿ ಹೆಚ್ಚಳ ಮಾಡಿ ಎಂದು ಹೇಳುವ ಮೂಲಕ ಎಲ್ಲರನ್ನು ನಗೆಯಲ್ಲಿ ತೇಲುವಂತೆ ಮಾಡಿದರು.

Comments

Leave a Reply

Your email address will not be published. Required fields are marked *