ಆನಂದ್ ಸಿಂಗ್ ನೋಡೋದಕ್ಕೆ ದುರ್ಯೋಧನ, ಮನಸ್ಸು ಧರ್ಮರಾಯನಂತೆ: ವಿ.ಎಸ್. ಉಗ್ರಪ್ಪ

ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್ ಸಿಂಗ್ ನಿಜಕ್ಕೂ ದುರ್ಯೋಧನ. ಆನಂದ್ ಸಿಂಗ್ ನೋಡೋಕೆ ದುಯೋರ್ಧನ ನಂತೆ ಕಂಡರೂ ಅವರು ಧರ್ಮರಾಯನಂತೆ ಇದ್ದಾರೆ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ. ಎಸ್. ಉಗ್ರಪ್ಪ ಹೇಳಿದ್ದಾರೆ.

ಹೊಸಪೇಟೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪರಿವರ್ತನಾ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಉಗ್ರಪ್ಪ, ಶಾಸಕ ಆನಂದ್ ಸಿಂಗ್ ಹಾಗೂ ಅವರ ಸೋದರಳಿಯ ಸಂದೀಪ್ ಸಿಂಗ್ ರನ್ನ ಹೊಗಳಿ ಅಟ್ಟಕ್ಕೆ ಎರಿಸುವ ಮೂಲಕ ಮತ ಬೇಟೆಗೆ ರಣತಂತ್ರ ರೂಪಿಸಿದ್ದಾರೆ.

ಆನಂದ್ ಸಿಂಗ್ ದೂರದಿಂದ ನೋಡಿದ್ರೆ ದುರ್ಯೋಧನನ ರೀತಿಯಲ್ಲಿ ಕಾಣುತ್ತಾರೆ. ಆದರೆ ಹತ್ತಿರದಿಂದ ಧರ್ಮರಾಯನಂತೆ ಕಾಣುತ್ತಾರೆ. ಅಲ್ಲದೆ ನಾನೂ ಬಳ್ಳಾರಿಯ ಗಿಡ್ಡನಾದರೆ ಆನಂದ್ ಸಿಂಗ್ ಸೋದರಳಿಯ ಸಂದೀಪ್ ಸಿಂಗ್ ಹೊಸಪೇಟೆ ಗಿಡ್ಡ ಎನ್ನುವ ಮೂಲಕ ಸಂದೀಪ್ ಸಿಂಗ್ ನ ಸಂಘಟನಾ ಚಾತುಯ್ರ್ಯತೆಯನ್ನು ಹೊಗಳಿ ಕೊಂಡಾಡಿದ್ದಾರೆ.

ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಹಾಗೂ ಆನಂದ್ ಸಿಂಗ್ ರ ಗಲಾಟೆ ನಂತರ ಇಬ್ಬರಿಂದಲೂ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಇದೀಗ ಜೆ.ಎನ್ ಗಣೇಶ್ ಬೆಂಬಲಿಗರಿಂದ ಘೇರಾವ್ ಹಾಕಿಸಿಕೊಂಡ ಬೆನ್ನಲ್ಲೆ ಹೊಸಪೇಟೆ ಶಾಸಕ ಆನಂದಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ.

Comments

Leave a Reply

Your email address will not be published. Required fields are marked *