ಬಿಜೆಪಿಯವ್ರು ನಾಯಿಗಳಿದ್ದಂತೆ, ಅವ್ರು ಬೊಗಳ್ತಿದ್ರೂ ಅಸ್ನೋಟಿಕರ್ ಆನೆ ಮುನ್ನುಗುತ್ತೆ: ಆನಂದ್ ಗುಡುಗು

ಕಾರವಾರ: ಬಿಜೆಪಿಯವರು ಮರಿ ಪುಡಾರಿಗಳನ್ನು ಬಿಟ್ಟು ಬೊಗಳುವಂತಹ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಐಟಿಯವರನ್ನು ಬಿಟ್ಟು ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯ ಮೇಲೆ ದಾಳಿ ಮಾಡಿಸಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾನು ಹೆದರುವುದಿಲ್ಲ. ಜನರ ಮುಂದೆ ಹೋಗುತ್ತೇನೆ ಎಂದು ಕಾರವಾರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ತನ್ನ ತಲೆಯಲ್ಲಿರುವ ಎಲ್ಲಾ ಅಸ್ತ್ರವನ್ನು ನನ್ನ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ನನ್ನನ್ನು ಮನೆಯಲ್ಲಿ ಕೂರಿಸುವ ವಿಚಾರ ನಡೆಯುತ್ತಿದೆ. ಬಿಜೆಪಿಯವರ ಕುತಂತ್ರವಿದು. ಅವರ ಅಸ್ತ್ರಕ್ಕೆ ನಾನು ಹೆದರುವುದಿಲ್ಲ. ಆನೆ ಮುಂದೆ ಹೋಗುತ್ತಿರಬೇಕು ನಾಯಿ ಬೊಗಳುತ್ತಿರಬೇಕು. ಹಾಗೆ ನಾನು ಮುಂದೆ ಹೋಗುತ್ತಿದ್ದೇನೆ ಬಿಜೆಪಿ ನಾಯಿಗಳು ಬೊಗಳುತ್ತಿದೆ ಎಂದು ಕಾರವಾರದಲ್ಲಿ ಆನಂದ್ ಅಸ್ನೋಟಿಕರ್ ಬಿಜೆಪಿ ವಿರುದ್ಧ ಹರಿಹಾಯ್ದರು.

ಶನಿವಾರ ಅಸ್ನೋಟಿಕರ್ ಸ್ನೇಹಿತನ ಮನೆ ಹಾಗೂ ಕಚೇರಿ ಮೇಲೆ ನಡೆದ ಐಟಿ ದಾಳಿಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ತಮ್ಮನ್ನು ಮನೆಯಲ್ಲಿ ಕೂರಿಸಲು ಬಿಜೆಪಿ ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದು ನಡೆಯುವುದಿಲ್ಲ ಎಂದು ಹರಿಹಾಯ್ದರು. ಕೇಂದ್ರ ಸಚಿವರಾಗಿ ಜಿಲ್ಲೆಗೆ ಏನೂ ಕೆಲಸ ಮಾಡಿಲ್ಲ, ನಮ್ಮ ಜಿಲ್ಲೆಯ ಏಳು ಮೀನುಗಾರರು ಕಾಣೆಯಾಗಿ ನಾಲ್ಕು ತಿಂಗಳಾಯಿತು. ಇಲ್ಲಿವರೆಗೂ ಸಾಂತ್ವನ ಹೇಳಲು ಬರಲಿಲ್ಲ. ಐದು ವರ್ಷದಲ್ಲಿ ಜನರ ಮುಂದೆ ಮುಖ ತೋರಿಸಲು ಬರಲಿಲ್ಲ. ನಾಲ್ಕು ತಿಂಗಳಿರಬೇಕಾದ್ರೆ ಮುಖ ತೋರಿಸಲು ಬಂದಿದ್ದಾರೆ. ಅಸ್ನೋಟಿಕರ್‍ಗೆ ಹೆದರಿ ಈ ಬಾರಿ ಪ್ರಚಾರಕ್ಕೆ ಇಳಿದಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *