ಮೃತದೇಹ ಕೊಂಡೊಯ್ಯುವಾಗ ವಾಸನೆ ಬಂದಿತ್ತೆಂದು ಫುಲ್ ಬಾಟಲ್ ಕುಡಿದ ಆಂಬುಲೆನ್ಸ್ ಚಾಲಕನಿಗೆ ಫೈನ್

ಬೆಂಗಳೂರು: ಮೃತದೇಹವನ್ನ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗುವಾಗ ವಾಸನೆ ಬಂದಿತ್ತು ಅಂತ ಫುಲ್ ಬಾಟಲ್ ಕುಡಿದು ವಾಹನ ಚಾಲನೆ ಮಾಡ್ತಿದ್ದ ಚಾಲಕನನ್ನು ಸಂಚಾರಿ ಪೊಲೀಸರು ತಡೆದು ದಂಡ ಹಾಕಿದ್ದಾರೆ.

ಕುಡಿದು, ಸೈರನ್ ಬಳಸಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ನಗರದ ಹಲಸೂರು ಗೇಟ್ ಬಳಿ ಸಂಚಾರಿ ಪೊಲೀಸರು ತಡೆದಿದ್ದಾರೆ. ವಿಜಯನಗರದ ಪುಷ್ಪಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆಂಬುಲೆನ್ಸ್ ಇದ್ದಾಗಿದ್ದು, ಯಶ್ವಂತ್ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ. ಆಂಬುಲೆನ್ಸ್ ತಡರಾತ್ರಿ ಕೆಆರ್ ಸರ್ಕಲ್ ಮಾರ್ಗವಾಗಿ ಬರುವಾಗ ಪೊಲೀಸರು ತಡೆದಿದ್ದಾರೆ.

ಇನ್ಸ್ ಪೆಕ್ಟರ್ ಮಹಮ್ಮದ್, ಆಂಬುಲೆನ್ಸ್ ತಡೆದು ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿರುವುದು ಖಚಿತವಾಗಿದೆ ಹಾಗೂ ಆಂಬುಲೆನ್ಸ್ ತಪಾಸಣೆ ನಡೆಸಿದಾಗ ಯಾವುದೇ ರೋಗಿ ಇರಲಿಲ್ಲ. ಪೊಲೀಸರು ಆಂಬುಲೆನ್ಸ್ ವಶಕ್ಕೆ ಪಡೆದು, ಚಾಲಕ ಯಶ್ವಂತ್ ಗೆ ಫೈನ್ ಹಾಕಿ ಕಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *