ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

ಬಳ್ಳಾರಿ: ಮೈಸೂರು ಅರಮನೆಯಲ್ಲಿ ಅನುಮತಿ ಪಡೆಯದೇ ಫೋಟೋಶೂಟ್ ಮಾಡಿದ್ದ ಛಾಯಾಚಿತ್ರಗಾರ ವೆಂಕಿ ಈಗ ಅಂತದ್ದೆ ಕಿತಾಪತಿ ಮಾಡಿದ್ದಾರೆ.

ಹೈದ್ರಾಬಾದ್ ಮೂಲದ ಫೋಟೋಗ್ರಾಫರ್ ವೆಂಕಿ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್ ಮಾಡಿದ್ದಾರೆ. ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ಬಳಿ ನವ ಜೋಡಿಯ ಫೋಟೋಶೂಟ್ ಮಾಡಲಾಗಿದೆ. ಹಂಪಿಯ ಅರಮನೆ, ಮಹನವಮಿ ದಿಬ್ಬ, ಮಾತಂಗ ಪರ್ವತ ಸೇರಿದಂತೆ ಹಲವು ಸ್ಮಾರಕಗಳ ಸುತ್ತ ಫೋಟೋಶೂಟ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಹಂಪಿ ಸ್ಮಾರಕಗಳು, ಹಂಪಿಯ ಸುತ್ತಮುತ್ತ ಫೋಟೋಗ್ರಫಿ ಮಾಡಲು ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆಯಲೇಬೇಕು. ಸ್ಥಳೀಯರಿಗೆ ಫೋಟೋ ತೆಗೆಯಲು ಬಿಡದ ಪ್ರಾಚ್ಯವಸ್ತು ಅಧಿಕಾರಿಗಳು ವೆಂಕಿಗೆ ಹೇಗೆ ಫೋಟೋಶೂಟ್ ಮಾಡಲು ಅವಕಾಶ ಕಲ್ಪಿಸಿದ್ರು ಅನ್ನೋ ಪ್ರಶ್ನೆ ಈಗ ಕಾಡುತ್ತಿದೆ.

ಮೈಸೂರು ಅರಮನೆಯಲ್ಲಿ ಇದೇ ವೆಂಕಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಿದ್ದು ಸಾಕಷ್ಟು ಸುದ್ದಿಯಾಗಿತ್ತು.

Comments

Leave a Reply

Your email address will not be published. Required fields are marked *