ಲೋಕಸಮರದ ಬಳಿಕ ಬಿಎಸ್‍ವೈಗೆ ಫುಲ್ ರೆಸ್ಟ್- ಸಚಿವ ಡಿಕೆಶಿ ಭವಿಷ್ಯ

ಶಿವಮೊಗ್ಗ: ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ರಾಘವೇಂದ್ರ ಅವರ ಮೇಲೆ ದಿಢೀರ್ ಪ್ರೀತಿ, ಅನುಕಂಪ ಹುಟ್ಟಿದೆ. ಲೋಕಸಭಾ ಚುನಾವಣೆಯ ನಂತರ ಬಿಎಸ್‍ವೈ ಫುಲ್ ರೆಸ್ಟ್ ತೆಗೆದುಕೊಳ್ಳುತ್ತಾರೆ ಎಂದು ಡಿಕೆಶಿ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ ಮೈತ್ರಿ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರಕ್ಕೆ ಶಿವಮೊಗ್ಗ ಜಿಲ್ಲೆಗೆ ಡಿಕೆಶಿ ಕಾಲಿಟ್ಟಿದ್ದಾರೆ. ಶನಿವಾರ ಭದ್ರಾವತಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಂಗೆ ಬೇಸರ ಇರೋದು ಬಿಜೆಪಿ ಹೈಕಮಾಂಡ್ ಮೇಲೆ ಹೊರತಾಗಿ ಬಿಎಸ್‍ವೈ, ಬಿವೈಆರ್ ಮೇಲಲ್ಲ. ಬಿಎಸ್‍ವೈ ಮೇಲೆ ಬಿಜೆಪಿ ಹೈಕಮಾಂಡ್‍ಗೆ ಲವ್ ಇದ್ದಿದ್ರೆ ಕೇಂದ್ರದಲ್ಲಿ ಮಂತ್ರಿ ಆಗಿರುತ್ತಿದ್ದರು. ಆದ್ರೆ ಇನ್ನೂ ರಾಜ್ಯ ರಾಜಕಾರಣದಲ್ಲೇ ಇದ್ದಾರೆ. ಪಾರ್ಲಿಮೆಂಟ್‍ನಲ್ಲಿ ಇಲ್ಲಿವರೆಗೂ ರಾಘವೇಂದ್ರ ಒಂದೂ ಮಾತಾಡಿಲ್ಲ. ಅದಕ್ಕೆ ನನ್ನ ತಮ್ಮ ರಾಘವೇಂದ್ರ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ. ಅಣ್ಣ ವಿಪಕ್ಷ ನಾಯಕರಾಗೇ ಇರಲಿ. ನಾನು ಮಂತ್ರಿಯಾಗೇ ಇರುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಎಸ್‍ವೈ ಭದ್ರಕೋಟೆಗೆ ಡಿಕೆಶಿ ಎಂಟ್ರಿ

ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್‍ಕುಮಾರ್‍ಗೆ ಬಿಜೆಪಿ ಟಿಕೆಟ್ ನೀಡದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ತೇಜಸ್ವಿನಿ ಅನಂತ್‍ಕುಮಾರ್ ಗೆ ಎಂಥಾ ಸ್ಥಿತಿ ಬಂತು ನೋಡಿ. ಇನ್ನು ಬಿಎಸ್‍ವೈ ಸ್ಥಿತಿ ಏನಾಗುತ್ತೇ ಯೋಚನೆ ಮಾಡಿ ಎಂದು ಕುಟುಕಿದ್ದಾರೆ.

ಡಿಕೆಶಿ ಅವರ ಈ ಮಾತುಗಳಿಂದ ಯಡಿಯೂರಪ್ಪ ಬಗ್ಗೆ ಬಿಜೆಪಿ ಹೈಕಮಾಂಡ್‍ಗೆ ಪ್ರೀತಿ ಇಲ್ವಾ, ಲೋಕಸಮರದ ಬಳಿಕ ಬಿಎಸ್‍ವೈರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಹೈಕಮಾಂಡ್ ಕಿತ್ತೊಗೆಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಅಲ್ಲದೆ ಯಡಿಯೂರಪ್ಪನ ಬಗ್ಗೆ ಸಚಿವ ಡಿಕೆ ಶಿವಕುಮಾರ್‍ಗೆ ಬೇಸರಾನೇ ಇಲ್ವಾ, ಡಿಕೆ ಶಿವಕುಮಾರ್ ತಮ್ಮನಾ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಎನ್ನುವ ಹಲವು ಪ್ರಶ್ನೆ ಸದ್ಯ ಹುಟ್ಟುಕೊಂಡಿದ್ದು, ರಾಜಕೀಯ ಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Comments

Leave a Reply

Your email address will not be published. Required fields are marked *