ಮದ್ಯಪಾನ ಸೇವಿಸಿ ನೇಣಿಗೆ ಶರಣಾದ ದಂಪತಿ!

ಕೊಪ್ಪಳ: ಕೌಟುಂಬಿಕ ಕಲಹದ ಹಿನ್ನೆಲೆ ಪತಿ ಪತ್ನಿ ಇಬ್ಬರು ಮದ್ಯಪಾನ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹುಲ್ಕಿಹಾಳ್ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಹುಲ್ಕಿಹಾಳ್ ಗ್ರಾಮದ ನಿವಾಸಿ ಈರಪ್ಪ(38) ಮತ್ತು ಉಮಾದೇವಿ(32) ನೇಣಿಗೆ ಶರಣಾದ ದಂಪತಿ. ಈರಪ್ಪ ಹಾಗೂ ಉಮಾದೇವಿ ಕುಟುಂಬದಲ್ಲಿ ಕೆಲ ದಿನಗಳಿಂದ ಇವರಿಬ್ಬರನ್ನು ನೋಡಿಕೊಳ್ಳುವ ವಿಚಾರದ ಬಗ್ಗೆ ಅವರ ಮಕ್ಕಳ ನಡುವೆ ಜಗಳ ನಡೆಯುತ್ತಿತ್ತು. ವಯಸ್ಸಾದ ಈರಪ್ಪ ಹಾಗೂ ಉಮಾದೇವಿಯನ್ನು ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಲ್ಲದೆ ತಂದೆ ತಾಯಿಯ ಬಳಿ ಹೊರಗಿನವರಂತೆ ವರ್ತಿಸುತ್ತಿದ್ದರು. ಆದರೂ ದಂಪತಿ ಹೇಗೋ ಜೀವನ ಸಾಗಿಸುತ್ತ ಬಂದಿದ್ದರು.

ತಮ್ಮ ಕೊನೆಕಾಲದಲ್ಲಿ ಹೆತ್ತ ಮಕ್ಕಳೇ ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಅಂತ ದಂಪತಿ ಬೇಸತ್ತು ಹೋಗಿದ್ದರು. ಜೀವನದಲ್ಲಿ ಬಹಳ ನೊಂದಿದ್ದರು. ಆದ್ರೆ ಶನಿವಾರ ರಾತ್ರಿ ಅದೇನಾಯ್ತೋ ಗೊತ್ತಿಲ್ಲ ಈರಪ್ಪ ಹಾಗೂ ಉಮಾದೇವಿ ಇಬ್ಬರು ಮದ್ಯಪಾನ ಸೇವಿಸಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

ಘಟನೆ ಕುರಿತು ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *