ದೇಹ ಇಲ್ಲದೇ ನರರಾಕ್ಷಸನಿಗೆ ಅಂತಿಮ ವಿಧಿವಿಧಾನಗೈದು ಸೇನೆಗೆ ಅವಮಾನ!

ಶ್ರೀನಗರ: ಜೈಶ್ ಉಗ್ರ ಅದಿಲ್ ಅಹ್ಮದ್ ದಾರ್ ಗೆ ಸ್ವಗ್ರಾಮ ಕಾಕಾಪೋರದಲ್ಲಿ ದೇಹ ಇಲ್ಲದೆ ಅಂತಿಮ ವಿಧಾನ ಮಾಡಿ ಯೋಧರಿಗೆ ಅವಮಾನ ಮಾಡಲಾಗಿದೆ.

ನರ ರಾಕ್ಷಸನನ್ನು ಹುತಾತ್ಮನಂತೆ ಬಿಂಬಿಸಿದ್ದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೈಶ್ ಉಗ್ರ ಅದಿಲ್ ಅಹ್ಮದ್‍ದಾರ್, ಘಟನೆ ನಡೆದ 10 ಕಿ.ಮೀ. ದೂರದಲ್ಲೇ ಮನೆ ಮಾಡಿದ್ದ. ಪ್ರಥಮ ಪಿಯುಸಿ ಡ್ರಾಪ್‍ಔಟ್ ಆಗಿದ್ದವ ಕಳೆದ ಮಾರ್ಚ್‍ನಲ್ಲಿ ಜೈಶ್ ಉಗ್ರ ಸಂಘಟನೆ ಸೇರಿದ್ದ.

ಈತನಿಗೆ ಮೊದಲಿಗೆ ಯಾವುದೇ ಪೈಶಾಚಿಕ ಕೃತ್ಯ ಒಪ್ಪಿಸಿರಲಿಲ್ಲ. ಈತನನು ಉಗ್ರ ಸಂಘಟನೆಯ `ಸಿ’ ಗ್ರೇಡ್‍ನಲ್ಲಿಡಲಾಗಿತ್ತು ಅಂತ ತಿಳಿದು ಬಂದಿದೆ. ಗುರುವಾರ ಈತ 350 ಕೇಜಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಸೇನಾ ವಾಹನಕ್ಕೆ ಗುದ್ದಿಸಿ ಫಿದಾಯಿನ್ ದಾಳಿ ನಡೆಸಿ ನಾನೀಗ ಸ್ವರ್ಗಕ್ಕೆ ಹೋಗ್ತೇನೆ ಎಂದು ಡೈಲಾಗ್ ಹೊಡೆದಿದ್ದ.

ಸ್ಫೋಟದ ತೀವ್ರಗೆ ಸುಮಾರು 10 ಕಿ.ಮೀ. ಶಬ್ದ ಕೇಳಿತ್ತು. ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು ಅಂತ ಸ್ಥಳೀಯರು ಹೇಳಿದ್ದಾರೆ. ಸ್ಫೋಟಕ್ಕೆ ಆರ್ ಡಿಎಕ್ಸ್ ಅಲ್ಲ, ಉತ್ಕೃಷ್ಟ ಯೂರಿಯಾ ಬಳಸಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಈ ಪಾಪ ಕೃತ್ಯದ ಮಾಸ್ಟರ್ ಮೈಂಡ್ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಘಾಝಿ. ಈತನೇ ಈ ದಾಳಿಯನ್ನು ಕಾರ್ಯರೂಪಕ್ಕೆ ತಂದಿದ್ದು ಅಂತಾ ಗುಪ್ತಚರ ಇಲಾಖೆ ಹೇಳಿದೆ. ಅಫ್ಘಾನಿಸ್ತಾನದಲ್ಲಿ ತರಬೇತುಗೊಂಡಿದ್ದ ಈತ ಸುಧಾರಿತ ಸ್ಫೋಟಕ ತಯಾರಿಕೆಯಲ್ಲಿ ಹೆಚ್ಚು ಪರಿಣಿತನಾಗಿದ್ದರಿಂದ ಪುಲ್ವಾಮಾ ಸ್ಫೋಟದ ಜವಾಬ್ದಾರಿ ಈತನಿಗೆ ನೀಡಲಾಗಿತ್ತು. ಅಲ್ಲದೇ ಅಫ್ಜಲ್ ಗುರುವಿಗೆ ಮರಣ ದಂಡನೆ ವಿಧಿಸಿದ ಫೆಬ್ರವರಿ 9ರಂದೇ ಈ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ಗುಪ್ತಚರ ದಳ ಹೇಳಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *