ಮನದಾಸೆ ಬಿಚ್ಚಿಟ್ಟ ಕೊಡಗಿನ ರಾಣಿ

ಬೆಂಗಳೂರು: ‘ಮಜಾ ಟಾಕೀಸ್’ ಖ್ಯಾತಿಯ ಶ್ವೇತಾ ಚಂಗಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಾವೂ ಗರ್ಭಿಣಿಯಾಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಇದೀಗ ತಮ್ಮ ಮನದಾಸೆಯೊಂದನ್ನು ಹೇಳಿಕೊಂಡಿದ್ದಾರೆ.

ನಟಿ ಶ್ವೇತಾ ಚಂಗಪ್ಪ ಅವರು ಮೂಲತಃ ಕೊಡಗಿನವರಾಗಿದ್ದಾರೆ. ಹೀಗಾಗಿ ಅವರು ಕೊಡಗಿನ ಶೈಲಿಯಲ್ಲಿ ಉಡುಪು ಧರಿಸಿಕೊಂಡು ತಮ್ಮ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಶ್ವೇತಾ ಅವರು ಹಸಿರು ಮತ್ತು ಮೆರೂನ್ ಬಣ್ಣದ ಸೀರೆಯಲ್ಲಿ ಸಖತ್ ಮಿಂಚಿದ್ದು, ಪಕ್ಕದಲ್ಲಿ ಅವರ ಪತಿ ಕೊಡಗಿನ ಉಡುಪನ್ನು ಧರಿಸಿದ್ದಾರೆ. ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಬಯಕೆಯೊಂದನ್ನು ಹೇಳಿಕೊಂಡಿದ್ದಾರೆ.

“ಒಂದು ಅರ್ಥಪೂರ್ಣ ಮಾತಿದೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ. ಹೀಗಾಗಿ ವೀರನಾಡು ಕೊಡಗಿನ ಹೆಣ್ಣಾಗಿ, ಆ ಒಂದು ಸುದಿನಕ್ಕೆ ಕಾಯುತ್ತಿರುವೆ” ಎಂದು ಶ್ವೇತಾ ಅವರು ತಮ್ಮ ಮನೆದಾಸೆಯನ್ನು ಹೇಳಿಕೊಂಡಿದ್ದಾರೆ.

ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ `ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ‘ಯಾರಿಗುಂಟು ಯಾರಿಗಿಲ್ಲ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ಆದರೆ ಇವರು ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ರಾಣಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

https://www.instagram.com/p/B1Qv6Foj2nO/

Comments

Leave a Reply

Your email address will not be published. Required fields are marked *