ಐಟಿ ಅಧಿಕಾರಿಗಳ ಪ್ರಶ್ನೆಗೆ ರಾಧಿಕಾ ಉತ್ತರ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆ ಮೇಲೆ ಬೆಳ್ಳಂಬೆಳ್ಳಗೆ ಐಟಿ ರೇಡ್ ನಡೆದಿದ್ದು, ನಟಿ ರಾಧಿಕಾ ಅವರ ಮನೆಯ ಮೇಲೂ ದಾಳಿ ನಡೆಯಿತು. ದಾಳಿ ನಡೆದ ಬಳಿಕ ಐಟಿ ಅಧಿಕಾರಿಗಳು ರಾಧಿಕಾ ಅವರನ್ನು ವಿಚಾರಿಸುವಾಗ ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐಟಿ ಅಧಿಕಾರಿಗಳು ಮೊದಲು ರಾಧಿಕಾ ಅವರನ್ನು ಪ್ರಶ್ನಿಸೋದಕ್ಕೆ ಮುಂದಾದಾಗ, ನಾನು ಬಾಣಂತನಕ್ಕಾಗಿ ತವರು ಮನೆಗೆ ಬಂದಿರುವೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ನಾನು ಏನು ಮಾತನಾಡಲಾರೆ. ನಿಮ್ಮ ಪ್ರಶ್ನೆಗೆ ಉತ್ತರಿಸಲಾರೆ ಎಂದು ರಾಧಿಕಾ ಪಂಡಿತ್ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ. ಐಟಿ ಅಧಿಕಾರಿಗಳಿಗೆ ಆಸ್ತಿ ವಿವರದ ಬಗ್ಗೆಯಾಗಲಿ, ಯಾವುದರ ಬಗ್ಗೆಯೂ ರಾಧಿಕಾ ಮಾಹಿತಿ ನೀಡಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಇದನ್ನೂ ಓದಿ: ನನಗೇನು ಗೊತ್ತಿಲ್ಲ – ಐಟಿ ಅಧಿಕಾರಿಗಳ ಪ್ರಶ್ನೆಗೆ ಯಶ್ ತಾಯಿ ಉತ್ತರ

ರಾಧಿಕಾರ ಆರೋಗ್ಯದ ದೃಷ್ಟಿಯಿಂದ ಅಧಿಕಾರಿಗಳು ಹೆಚ್ಚು ಪ್ರಶ್ನೆಗಳನ್ನು ಕೇಳಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಐಟಿ ಅಧಿಕಾರಿಗಳು ಕೇವಲ ರಾಧಿಕಾ ಅವರ ತಂದೆಯನ್ನು ವಿಚಾರಿಸಿ ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ರಾಧಿಕಾ ತಂದೆ ಅವರನ್ನು ಪ್ರಶ್ನಿಸಿದ್ದಾಗ ಅವರು, “ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಅವರನ್ನೇ ಕೇಳಿ. ಅವರೆ ತಾನೇ ನನ್ನ ಕರೆದುಕೊಂಡು ಹೋಗುತ್ತಿರೋದು” ಎಂದು ಉತ್ತರಿಸಿದ್ದಾರೆ. ಸದ್ಯ ರಾಧಿಕಾ ಅವರ ತಂದೆಯನ್ನು ಐಟಿ ಅಧಿಕಾರಿಗಳು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *