ಕೊಪ್ಪಳ: ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ನಟ ಯಶ್ ಸನ್ಮಾನ

ಕೊಪ್ಪಳ: ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಹೂಳೆತ್ತಲು ಚಾಲನೆ ನೀಡಿದ್ದ ನಟ ಯಶ್, ಸೋಮವಾರ ಕೆರೆಗೆ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ನಟ ಯಶ್ ಕಾರ್ಮಿಕರಿಗೆ ಸನ್ಮಾನ ಮಾಡಿದ್ರು.

ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದ ಯಶ್, ವಿಶ್ವ ಕಾರ್ಮಿಕ ದಿನದ ಅಂಗವಾಗಿ 35 ಕಾರ್ಮಿಕರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡೋ ವೇಳೆ ನಟ ಯಶ್ ಹೇಳಿದ ಮಾತಿನಂತೆ ಯಾರಿಗೂ ಮಾಹಿತಿ ನೀಡದಂತೆ ಕೆರೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದಾರೆ. ಯಶೋಮಾರ್ಗ ಫೌಂಡೇಶನ್ ವತಿಯಿಂದ 4 ಕೋಟಿ ವೆಚ್ಚದಲ್ಲಿ ತಲ್ಲೂರ ಕೆರೆ ಹೂಳನ್ನು ಎತ್ತಲಾಗುತ್ತಿದೆ.

ಈ ವೇಳೆ ಯಶ್ ಜೆಸಿಬಿಯನ್ನು ಚಲಾಯಿಸುವ ಮೂಲಕ ಕಾರ್ಮಿಕರಿಗೆ ಹುರಿದುಂಬಿಸಿದರು. ಕಾಮಗಾರಿಗೆ ಚಾಲನೆ ನೀಡುವ ವೇಳೆ ಪತ್ನಿ ರಾಧಿಕಾ ಪಂಡಿತ್ ಸಮೇತ ಆಗಮಿಸಿದ್ದ ನಟ ಯಶ್ ಈ ಬಾರಿ ಒಬ್ಬರೇ ಅಗಮಿಸಿದ್ದರು.

 

Comments

Leave a Reply

Your email address will not be published. Required fields are marked *