ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

ಬೆಂಗಳೂರು: ಕೊನೆಗಳಿಗೆಯಲ್ಲಿ ಸಿನಿಮಾ ರಿಲೀಸ್ ವೇಳೆ ನನ್ ಜೊತೆ ಸಂಪಾದಿಸಿರೋ ಜನ ಇದ್ದಾರೆ. ಒಂದು ದಿನ ಡಿಲೇ ಆಗಿದ್ದಕ್ಕೆ ಯಾವ ಮಾನ ಮಾರ್ಯದೆ ಹೋಗಲ್ಲ. ಬದನೆಕಾಯಿಯೂ ಆಗಿಲ್ಲ ಎಂದು ನಟ ಸುದೀಪ್ ಕೋಟಿಗೊಬ್ಬ 3 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ಹೇಳಿದ್ದಾರೆ.

ದಸರ ಹಬ್ಬದ ಗಿಫ್ಟ್ ಆಗಿ ರಿಲೀಸ್ ಆಗಿರೋ ಕೋಟಿಗೊಬ್ಬ 3 ಸಿನಿಮಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದೆ. ಸಿನಿಮಾ ತೆರೆ ಮೇಲೆ ಅಬ್ಬರಿಸಿ, ಬಾಕ್ಸ್ ಆಫೀಸ್‍ನಲ್ಲಿ ಕಮಾಲ್ ಮಾಡಿದೆ. ಶಿವಕಾರ್ತಿಕ್ ಆಕ್ಷನ್‍ಕಟ್ ಹೇಳಿರೋ ಸಿನಿಮಾವಾಗಿದ್ದು, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ಕೋಟಿಗೊಬ್ಬ 3 ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ನಟ ಉಪೇಂದ್ರ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಚಿತ್ರ ಯಶಸ್ವಿಯಾಗಿದೆ, ಅದಕ್ಕೆ ಅಭಿನಂದನೆಗಳು. ನನ್ನನ್ನ ನಿರ್ದೇಶಕ ಮಾಡಿದ್ದು ಸೂರಪ್ಪ ಬಾಬು ಎಂದು ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:  ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

Sudeep Kotigobba 3 interview

ಈ ವೇಳೆ ಮಾತನಾಡಿದ ಸುದೀಪ್, ಕೊನೆಗಳಿಗೆಯಲ್ಲಿ ಸಿನಿಮಾ ರಿಲೀಸ್ ವೇಳೆ ನನ್ ಜೊತೆ ಸಂಪಾದಿಸಿರೋ ಜನ ಇದ್ದಾರೆ ಅವರಿಂದ ಅದಾಗಿದ್ದು. ಸೂರಪ್ಪ ಬಾಬು ಆಕ್ಟಿಂಗ್ ಮಾಡಿದ್ದಾರೆ. ಕಾಲೇಜ್ ದಿನಗಳಲ್ಲಿ ನಿಮ್ ಹತ್ರ ಬರಬೇಕಾದ್ರೆ ಇದ್ದ ದಿನಗಳನ್ನ ನಾನ್ ಯಾವತ್ತೂ ಮರೆಯಲ್ಲ, ಚಿತ್ರರಂಗದ ಪರವಾಗಿ ಶುಭ ಹಾರೈಸಿದ್ದೀರಿ ಥ್ಯಾಂಕ್ಸ್ ಎಂದು ಉಪೇಂದ್ರ ಅವರಿಗೆ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

ಒಂದು ದಿನ ಡೀಲೆ ಅದ್ರೂ ಕೂಡ ನನ್ನ ಅಭಿಮಾನಿಗಳು ಸಹಕಾರ ನೀಡಿದ್ದಾರೆ. ಅ ಸ್ನೇಹಿತರು ನೀಡಿದ ಸಹಕಾರಕ್ಕೆ ಧ್ಯನವಾದಗಳು. ಒಂದು ದಿನ ಡಿಲೇ ಆಗಿದ್ದಕ್ಕೇ ಯಾವ ಮಾನ ಮಾರ್ಯದೆ ಹೋಗಲ್ಲ. ಬದನೆಕಾಯಿಯೂ ಕೂಡ ಆಗಿಲ್ಲ. ಅದಕ್ಕೆಲ್ಲ ತಲೆಕೆಡಸಿಕೊಳ್ಳಬಾರದು ಬಾಬು. ಒಬ್ಬ ರಿಟರ್ಡ್ ಆಂಕರ್‍ನ ಕರೆಸಿ ಸಮಾರಂಭ ಮಾಡುತ್ತಿದ್ದಾರೆ ಎಂದು ಅರುಣ್ ಸಾಗರ್ ಅವರಿಗೆ ಸುದೀಪ್ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ:  ವಿಚ್ಛೇದನದ ನಂತ್ರ ಚಾರ್ ಧಾಮ್ ಯಾತ್ರೆಯಲ್ಲಿ ನಟಿ ಸಮಂತಾ

Comments

Leave a Reply

Your email address will not be published. Required fields are marked *