ಅಭಿಮಾನಿಯ ಅಭಿಮಾನದ ನೆಲದಲ್ಲಿ ರಾಜೇಶ್ ಅಂತ್ಯಕ್ರಿಯೆ

ನ್ನಡ ಸಿನಿಮಾ ರಂಗದ ಹಿರಿಯ ನಟ ರಾಜೇಶ್ ಅವರ ಅಂತ್ಯಕ್ರಿಯೆ ತುಮಕೂರು ರಸ್ತೆಯ, ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರದಲ್ಲಿ ನಡೆಯಿತು. ಇದಕ್ಕೂ ಮುನ್ನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರಕಾರ ಅವರಿಗೆ ಪೊಲೀಸ್ ಗೌರವ ಸಲ್ಲಿಸಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟಿ ತಾರಾ, ಸುಮಲತಾ ಅಂಬರೀಶ್, ಗಿರಿಜಾ ಲೋಕೇಶ್, ನಟರಾದ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಸಾಕಷ್ಟು ತಾರೆಯರು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು. ಇಡೀ ಸಿನಿಮಾ ರಂಗವೇ ಹಿರಿಯ ನಟನ ಅಂತಿಮ ದರ್ಶನಕ್ಕೆ ಆಗಮಿಸಿತ್ತು.  ಇದನ್ನೂ ಓದಿ : ಶತಕದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್


ರವೀಂದ್ರ ಕಲಾಕ್ಷೇತ್ರದಿಂದ ಗೋವಿಂದಪುರಕ್ಕೆ ಪಾರ್ಥೀವ ಶರೀರವನ್ನು ಅಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯಲಾಯಿತು. ರಾಜೇಶ್ ಅವರ ಅಪ್ಪಟ ಅಭಿಮಾನಿ ಸಿದ್ಧಲಿಂಗಯ್ಯ ನೀಡಿದ ಹತ್ತು ಗುಂಟೆಯ ತೋಟದಲ್ಲಿ ಕಲಾತಪಸ್ವಿ ಮಣ್ಣಲ್ಲಿ ಮಣ್ಣಾದರು. ಅಪಾರ ಅಭಿಮಾನಿಗಳು, ಸಿನಿಮಾ ರಂಗದ ಗಣ್ಯರು, ರಾಜಕೀಯ ಮುಖಂಡರು ಹಾಗೂ ರಾಜೇಶ್ ಕುಟುಂಬ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿತ್ತು. ಇದನ್ನೂ ಓದಿ : ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ


ಅಂತಿಮ ಪೂಜಾ ವಿಧಾನವನ್ನು ರಾಜೇಶ್ ಅವರ ಹಿರಿಯ ಪುತ್ರ ಡಾ.ಸಂದಾನಂದ್ ನೆರವೇರಿಸಿದರು. ಮತ್ತೋರ್ವ ಪುತ್ರ ಧನಂಜಯ್, ರಾಜೇಶ್ ಅವರ ಅಳಿಯ ಅರ್ಜುನ್ ಸರ್ಜಾ ಕೂಡ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *