ಆರ್ಟಿಕಲ್ 370 ರದ್ದು – ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದ್ರು ನಟ ಜಗ್ಗೇಶ್

ಬೆಂಗಳೂರು: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ನಟ ಜಗ್ಗೇಶ್ ಅವರು, ಈ ನಿರ್ಧಾರವನ್ನು ಭಾರತೀಯರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ‘ಕರ್ಣಾನಂದವಾಯಿತು ಇಂದಿನ ನನ್ನ ಹೆಮ್ಮೆಯ ಭಾರತೀಯ ಜನತಾ ಪಕ್ಷದ ಐತಿಹಾಸಿಕ ನಿರ್ಣಯ. ಭಾರತೀಯರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 1947 ಅಲ್ಲಾ 2019 ಭಾರತಕ್ಕೆ ನಿಜವಾದ ಸ್ವತಂತ್ರ ಸಿಕ್ಕ ದಿನ. ಒಕ್ಕೊರಲಿನ ಸ್ವಾಭಿಮಾನದ ಘೋಷ ಮೊಳಗಲಿ’ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ, ‘ಕಾಶ್ಮೀರ ಭಾರತಮಾತೆಯ ಮುಕುಟ!.. 70 ವರ್ಷ ಕಳಚಿಟ್ಟು, ಭಾರತಮಾತೆಗೆ ಜೈ ಅಂದರೆ ಕಳೆಕಟ್ಟದು!.. ಇಂದು ಭಾರತಮಾತೆ ಸ್ವಾಭಿಮಾನಿ ಮಕ್ಕಳು ಅವಳ ಮುಕುಟ ತಲೆ ಮೇಲೆ ಇಡಲು ಸನ್ನದ್ಧರಾಗಿದ್ದಾರೆ. ಅವರ ಜೊತೆ ಕೈ ಜೋಡಿಸಿ ಎಲ್ಲರು ಜೈ ಅನ್ನುವ ಕಾಲಬಂದಿದೆ! ಈಗ ಯಾರು ಅವಳ ಮಕ್ಕಳು ಜಗ ಅರಿವುದು ನಿಜ ಮಕ್ಕಳು, ಜಗ ಅರಿವುದು ಜೈಹಿಂದ್’ ಎಂದಿದ್ದಾರೆ.

ಜಮ್ಮು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಐತಿಹಾಸಿಕ ನಿರ್ಣಯವನ್ನು ಸ್ವಾಗತಿಸಿ ದೇಶದ್ಯಾಂತ ಹಲವರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜಗ್ಗೇಶ್ ಅವರ ಟ್ವೀಟ್‍ಗೂ ಹಲವು ಮಂದಿ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *