”ನನ್ನಂತ ಭಾವುಕನ ಕಣ್ಣಿಗೆ ಬೀಳಬೇಕೆ, ಬಹಳ ಭಾವುಕನಾದೆ”

ಬೆಂಗಳೂರು: ತಾಯಿ ಕಳೆದುಕೊಂಡಿದ್ದ ಮರಿ ಆನೆಯೊಂದನ್ನು ನೋಡಿ, ನನ್ನಂತ ಭಾವುಕನ ಕಣ್ಣಿಗೆ ಬೀಳಬೇಕೆ, ಬಹಳ ಭಾವುಕನಾದೆ ಎಂದು ನವರಸನಾಯಕ ಜಗ್ಗೇಶ್ ನೋವಿನಿಂದ ಹೇಳಿಕೊಂಡಿದ್ದಾರೆ.

ತಾಯಿ ಆನೆಯನ್ನ ಕಳೆದುಕೊಂಡಿದ್ದ ಮರಿ ಆನೆಯೊಂದನ್ನು ಜಗ್ಗೇಶ್ ನೋಡಿದ್ದು, ತುಂಬಾ ಬೇಸರಗೊಂಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಅವರು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ಹೇಳಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
“ಅಮ್ಮನ ಕಳದುಕೊಂಡ ಪುಟಾಣಿ ಆನೆಮರಿ. ಇದರ ಅಮ್ಮ ಕೆಸರಿನಲ್ಲಿ ಸಿಕ್ಕಿ ಮೃತಪಟ್ಟಿದೆ. ಇದನ್ನು ನೋಡಿದ ವಿಶಾಲ ಹೃದಯಿಗಳು ಇದರ ಆರೈಕೆ ಮಾಡಿ ರಕ್ಷಿಸಿದ್ದಾರೆ. ಈಗ ಅದು ನನ್ನಂತ ಭಾವುಕನ ಕಣ್ಣಿಗೆ ಬೀಳಬೇಕೆ, ಬಹಳ ಭಾವುಕನಾದೆ. ಸಿಕ್ಕ ಸಮಯದಲ್ಲಿ ಸಾಧ್ಯವಾದಷ್ಟು ಮುದ್ದಾಡಿದೆ. ಆದರೆ ಭದ್ರಾವತಿ ಚುನಾವಣಾ ಪ್ರಚಾರ ಪ್ರಯುಕ್ತ ಒಲ್ಲದ ಮನಸ್ಸಿನಿಂದ ನಿರ್ಗಮಿಸಿದೆ” ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಮರಿ ಆನೆಯ ಜೊತೆ ಕಾಲದ ಕಳೆದು ವಿಡಿಯೋವನ್ನು ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

https://www.instagram.com/p/BwD1zH8jFI5/

Comments

Leave a Reply

Your email address will not be published. Required fields are marked *