ಬೆಂಗಳೂರು: ನಾಗರತ್ನ ಅವರು ತಮ್ಮ ಎರಡನೇ ಪತ್ನಿ ಕೀರ್ತಿಗೌಡ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ನಟ ದುನಿಯಾ ವಿಜಯ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಹೆಣ್ಣು ಮಗು ಅಂತ ಹೇಳಿ ಸಿಂಪತಿ ಗಿಟ್ಟಿಸುತ್ತಿದ್ದರು. ನಾವು ಯಾರು ನೆಮ್ಮದಿಯಾಗಿ ಇರಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ. ಸದ್ಯ ಕೊನೆಗೆ ಸತ್ಯ ಗೊತ್ತಾಗಿದೆ. ಸುಮ್ಮನೆ ಅವಳಂತೆ ನಾನು ನಾಯಿಯಂತೆ ಮಾತನಾಡಲು ಇಷ್ಟ ಇಲ್ಲ. ಏನಾಗಿದೆ ಅದಕ್ಕೆ ನ್ಯಾಯ ಕೊಡಿಸಿ ಅಷ್ಟೆ. ಒಂದು ಫೇಕ್ ಕಂಪ್ಲೇಂಟ್ ಕೊಟ್ಟರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ ಎಂದು ಬೇಸರದಿಂದ ವಿಜಿ ಹೇಳಿದ್ದಾರೆ. ಇದನ್ನೂ ಓದಿ: ನಾಗರತ್ನ ದಾದಾಗಿರಿ ಪ್ರಕರಣ- ನಿಜವಾಗಿ ಅಲ್ಲಿ ನಡೆದಿದ್ದೇನು: ಕೀರ್ತಿಗೌಡ ಮಾತು

ನನಗೂ ತುಂಬಾ ಕೆಲಸ ಇದೆ. ಆದರೆ ಈ ಸಮಸ್ಯೆಯಿಂದ ಏನು ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ನಾನು ನಾಗರತ್ನ ವಿರುದ್ಧ ದೂರು ಕೊಡುತ್ತೇನೆ. ಈ ಬಗ್ಗೆ ಸಂಪೂರ್ಣವಾಗಿ ಸಂಜೆ ಸುದ್ದಿಗೋಷ್ಠಿ ಮಾಡಿ ಮಾತನಾಡುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!
ಇಷ್ಟು ವರ್ಷ ದುನಿಯಾ ವಿಜಿ ಸರಿಯಿಲ್ಲ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಸಿಂಪತಿ ಪಡೆದುಕೊಂಡಿದ್ದರು. ಜನರ ನಂಬಿಕೆಯಿಂದ ಈ ರೀತಿ ಮಾಡಿದ್ದಾರೆ ಎಂದು ಇದೇ ವೇಳೆ ಕೀರ್ತಿಗೌಡ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=alaw833_NkQ

Leave a Reply