ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅಂದರ್ – ಆರು ಬೈಕ್ ವಶ

ನೆಲಮಂಗಲ: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದು, ಆರು ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಿನಕ್ಕೊಂದು ಬೈಕ್ ನಲ್ಲಿ ಓಡಾಡುವ ಬಯಕೆ, ಎಲ್ಲರಂತೆ ಬಿಂದಾಸ್ ಆಗಿ ಐಷಾರಾಮಿ ಜೀವನ ನಡೆಸುವ ಕಾಯಾಲಿ. ಇನ್ನೂ ಮೀಸೆ ಕೂಡ ಚಿಗುರದ ರಾಮನಗರ ಜಿಲ್ಲೆಯ ಸೋಲೂರು ಹೋಬಳಿಯ ರಂಗೇನಹಳ್ಳಿಯ 18 ವರ್ಷದ ಮನೋಜ್ ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಮನೋಜ್ ಬೈಕ್ ಕದ್ದು, ಸುತ್ತಾಡುವುದನ್ನು ತನ್ನ ಶೋಕಿಗೆ ಆಯ್ಕೆ ಮಾಡಿಕೊಂಡಿದ್ದ. ಇದನ್ನೂ ಓದಿ: ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ

ನೆಲಮಂಗಲ ಟೌನ್ ಪೊಲೀಸ್ ಅಧಿಕಾರಿ ಕುಮಾರ್ ನೇತೃತ್ವದ ತಂಡ ಸುಮಾರು ದಿನಗಳಿಂದ ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿ ಪಡೆದು ಆರೋಪಿ ಮನೋಜ್ ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದು 1074 ಪಾಸಿಟಿವ್, 4 ಸಾವು – ಪಾಸಿಟಿವಿಟಿ ರೇಟ್ 0.63%ಕ್ಕೆ ಇಳಿಕೆ

ಬಂಧಿತನಿಂದ 6 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *