ಖಾತಾ ಉತಾರ ನೀಡಲು ಲಂಚ ಕೇಳಿದ್ದ ನಗರಸಭೆ ಸಿಬ್ಬಂದಿ ಬಿದ್ರು ಎಸಿಬಿ ಬಲೆಗೆ!

ಕಾರವಾರ: ಖಾತಾ ಉತಾರ ಹಾಗೂ ಫಾರಂ ನಂಬರ್ 3 ನೀಡಲು ಲಂಚ ಕೇಳಿ, ಇಂದು ಹಣ ಸ್ವೀಕರಿಸುತ್ತಿದ್ದ ವೇಳೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಗರಸಭೆಯ ಇಬ್ಬರು ಸಿಬ್ಬಂದಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದ್ದಾರೆ.

ಕಾರವಾರದ ನಗರಸಭೆ ತೆರಿಗೆ ವಸೂಲಿ ಸಹಾಯಕಾರಗಿ ಕೆಲಸ ಮಾಡುತ್ತಿರುವ ಉಲ್ಲಾಸ್ ನಾಯ್ಕ್ ಹಾಗೂ ಸುರೇಶ್ ಎಂಬುವರೇ ಎಸಿಬಿ ದಾಳಿಗೆ ಸಿಕ್ಕಿಬಿದ್ದವರು. ಇಬ್ಬರು ಖಾತಾ ಉತ್ತರ ಹಾಗೂ ಫಾರಂ ನಂಬರ್ 3 ನೀಡಲು 4 ಸಾವಿರ ರೂ. ಕೊಡಬೇಕು ಅಂತಾ ಸಂದೇಶ್ ನಾಯ್ಕ್ ಎನ್ನುವವರಿಗೆ ಹೇಳಿದ್ದರು.

ಇಂದು ಕಚೇರಿಯಲ್ಲಿ ಸಂದೇಶ್ ನಾಯ್ಕ್ ಅವರಿಂದ ಉಲ್ಲಾಸ್ ಹಾಗೂ ಸುರೇಶ್ ಲಂಚ ಪಡೆಯುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಎಸಿಬಿ ಡಿವೈಎಸ್ ಪಿ.ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿದೆ. ಈ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *