1 ಕೋಟಿ ರಸ್ತೆ ಕಾಮಗಾರಿ ಬಿಲ್ ಮಾಡಲು ಗುತ್ತಿಗೆದಾರನಿಂದ ಚಿಂಚೋಳಿ ಎಇ ಹಣ ವಸೂಲಿ

ಕಲಬುರಗಿ: ರಸ್ತೆ ಕಾಮಗಾರಿ ಬಿಲ್ ಸಂಬಂಧ ಗುತ್ತಿಗೆದಾರನಿಂದ ಚಿಂಚೋಳಿ ತಾಲೂಕಿನ ಪಿಡಬ್ಲುಡಿ ಎಇ ವೇಂಕಟೇಶ್ ಬಿರಾದಾರ 30 ಸಾವಿರ ಲಂಚ ಪಡೆದಿರುವ ಘಟನೆ ನಡೆದಿದೆ.

ಕಲಬುರಗಿಯ ಜಿಲ್ಲಾಧಿಕಾರಿ ಆವರಣದಲ್ಲಿಯೇ ಗುತ್ತಿಗೆದಾರನಿಗೆ ಭೇಟಿಯಾದ ಚಿಂಚೋಳಿ ಪಿಡಬ್ಲುಡಿ ಎಇ ವೆಂಕಟೇಶ್ ಬಿರಾದಾರ್, ತಾಲೂಕಿನ ಪೋತಂಗಲ ಗ್ರಾಮದಲ್ಲಿ ನಡೆದ 1 ಕೋಟಿ ರಸ್ತೆ ಕಾಮಗಾರಿ ಕುರಿತು ಗುತ್ತಿಗೆದಾರನಿಂದ ಹಣ ಪಡೆದಿದ್ದಾನೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

ಹಣ ನೀಡುವಾಗ ನನ್ನ ಬಳಿ ಅಷ್ಟೊಂದು ಹಣ ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಅಂತಾ ಅಳಲು ತೋಡಿಕೊಂಡರೂ ಅದಕ್ಕೆ ಎಇ ಬಿರಾದಾರ ಸೊಪ್ಪು ಹಾಕದೇ, ಎಇಇ, ಥರ್ಡ್ ಪಾರ್ಟಿ, ಹಣ ಕೊಡಬೇಕು ಅಂತಾ ಹೇಳಿ ಹಣ ವಸೂಲಿ ಮಾಡಿದ್ದಾನೆ. ಇದೀಗ ಆಪ್ ಪಕ್ಷದ ಕಾರ್ಯಕರ್ತರು ಅಧಿಕಾರಿಯ ಲಂಚಬಾಕತನದ ವೀಡಿಯೋ ಮಾಧ್ಯಮಗಳಿಗೆ ನೀಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

Comments

Leave a Reply

Your email address will not be published. Required fields are marked *