ಯುಪಿಯಲ್ಲಿ 7 ಮಕ್ಕಳನ್ನು ಕೊಂದ ತೋಳ – ಆಪರೇಷನ್ ಭೇಡಿಯಾ ನಡೆಸಿ ಸೆರೆ

ಲಕ್ನೋ: ಕಾಡಿನಿಂದ ಬಂದ ತೋಳಗಳು 7 ಮಕ್ಕಳನ್ನು ಕೊಂದು ಮಹಿಳೆಯೊಬ್ಬಳನ್ನು ಗಾಯಗೊಳಿಸಿದ್ದ ಘಟನೆ ಬಹ್ರೈಚ್‌ (Bahraich) ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳನ್ನು ಕೊಂದ ತೋಳಗಳಿಗೆ ಆಪರೇಷನ್ ಭೇಡಿಯಾ ನಡೆಸಿ ಸೆರೆ ಹಿಡಿಯಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಬಹ್ರೈಚ್‌ ಜಿಲ್ಲೆಯ 7 ಮಕ್ಕಳನ್ನು ಕೊಂದು ಮಹಿಳೆಯೊಬ್ಬರನ್ನು ತೋಳಗಳು ಗಾಯಗೊಳಿಸಿದ್ದವು. ಮಂಗಳವಾರ ರಾತ್ರಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಪಟಾಕಿ ಸಿಡಿಸುವ ಮೂಲಕ ತೋಳಗಳನ್ನು ಸೆರೆಹಿಡಿಯಲಾಗಿದ್ದು, ಅವುಗಳಿಗೆ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮುಡಾ ಹಗರಣ ಮುಚ್ಚಾಕಲು ಕಾಂಗ್ರೆಸ್ ಷಡ್ಯಂತ್ರ: ನಿಖಿಲ್

ತೋಳಗಳನ್ನು ಹಿಡಿಯಲು ಸುಮಾರು 16 ತಂಡಗಳನ್ನು ರಚಿಸಲಾಗಿತ್ತು. ಆಪರೇಷನ್‌ಲ್ಲಿ ಡ್ರೋನ್ ಕ್ಯಾಮೆರಾ ಮತ್ತು ನಕ್ಷೆಗಳ ಉಪಯೋಗ ಮಾಡಿಕೊಳ್ಳಲಾಗಿತ್ತು. ಅರಣ್ಯ ಇಲಾಖೆಯ ಡಂಗ್ ಮತ್ತು ಉರಿನೆ ಹೆಸರಿನ ಆನೆಗಳನ್ನು ಬಳಸಿಕೊಂಡು ಅಧಿಕಾರಿಗಳು ತೋಳಗಳನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಆಪರೇಷನ್ ಮೇಲೆ ನಿಗಾ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಹಳ್ಳಿಗಳಲ್ಲಿ ರಾತ್ರಿ ಗಸ್ತು ತಿರುಗುತ್ತಾ, ಜನರಲ್ಲಿ ಎಚ್ಚರಿಕೆ ಮೂಡಿಸಲು ಆಶಾ ಕಾರ್ಯಕರ್ತರನ್ನು ಈ ತೋಳ ಹಿಡಿಯುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿ ಮೋನಿಕಾ ರಾಣಿ ಹೇಳಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪಕ್ಕ – ಅವರ ಪಾಪ ಅವರನ್ನು ಸುಮ್ಮನೆ ಬಿಡಲ್ಲ: ವಿಜಯೇಂದ್ರ