ನಡುರಾತ್ರಿ ಕಾರು ಹಿಂಬಾಲಿಸಿ ಅಪರಿಚಿತನ ಕಿರಿಕ್ – ಪುಂಡನ ಪುಂಡಾಟಕ್ಕೆ ಇಡೀ ಕುಟುಂಬ ಹೈರಾಣು

ಬೆಂಗಳೂರು: ತಡರಾತ್ರಿ ಹೆಬ್ಬಾಳ ಸರ್ಕಲ್ ಬಳಿ ಅಪರಿಚಿತನ ಪುಂಡಾಟಕ್ಕೆ ಕುಟುಂಬವೊಂದು ನಲುಗಿ ಹೋಗಿದೆ.

ಹೆಬ್ಬಾಳ ಬಳಿ ದೀಪಾ ಶ್ರೀಕುಮಾರ್ ಎಂಬವರು ಕಾರಿನ ಟೈಯರ್ ಬದಲಿಸುವಾಗ ದೆಹಲಿ ನೋಂದಣಿ ಇರುವ ಕಾರೊಂದು ಪಕ್ಕದಲ್ಲಿ ಬಂದು ನಿಂತಿದೆ. ಕಾರಿನಲ್ಲಿದ್ದ ಅಪರಿಚಿತ ದೀಪಾ ಶ್ರೀಕುಮಾರ್‍ಗೆ ಅಸಭ್ಯವಾಗಿ ಸನ್ನೆ ಮಾಡಿದ್ದಾನೆ. ಇದಕ್ಕೆ ಕೇರ್ ಮಾಡದ ಕುಟುಂಬ ಕಾರು ಹತ್ತಿದೆ. ಆದರೆ ಅಲ್ಲಿಂದಲೂ ಹಿಂಬಾಲಿಸಿಕೊಂಡು ಬಂದ ಅಪರಿಚಿತ ಕುಟುಂಬಕ್ಕೆ ಇನ್ನಿಲ್ಲದಂತೆ ಟಾರ್ಚರ್ ಕೊಟ್ಟಿದ್ದಾನೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್

ಬಳಿಕ ದೀಪಾ ಶ್ರೀಕುಮಾರ್ ಕುಟುಂಬ ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ನಡೆಯುತ್ತಿರುವ ಘಟನೆಯನ್ನು ವಿವರಿಸಿದ್ದಾರೆ. ಆದರೂ ಹಿಂಬಾಲಿಸಿಕೊಂಡು ಬಂದಿದ್ದ ಅಪರಿಚಿತ ಕೊನೆಗೆ ಗೊರಗುಂಟೆ ಪಾಳ್ಯ ಬಳಿ ಹೊಯ್ಸಳ ಪೊಲೀಸರನ್ನು ಕಂಡು ಕಾಲ್ಕಿತ್ತಿದ್ದಾನೆ. ತಡರಾತ್ರಿ 2 ಗಂಟೆಯಲ್ಲಿ ಮಗ, ಮಗಳೊಂದಿಗೆ ದೀಪಾ ಶ್ರೀಕುಮಾರ್ ಮನೆಗೆ ವಾಪಸಾಗುತ್ತಿದ್ದರು. ಅಪರಿಚಿತನ ಪುಂಡಾಟಕ್ಕೆ ಹೆದರಿದ ಕುಟುಂಬ  ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲೇ ರಾತ್ರಿ ಕಳೆದಿತ್ತು. ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಆನೇಕಲ್‍ನಲ್ಲಿ ಜೆಡಿಎಸ್ ಮುಖಂಡನ ಜೊತೆ ಮಹಿಳೆ ಬರ್ಬರ ಹತ್ಯೆ

Comments

Leave a Reply

Your email address will not be published. Required fields are marked *