ಪೇಜಾವರ ಶ್ರೀಗಳಿಗಿಂದು ಹರ್ನಿಯಾ ಆಪರೇಷನ್- ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ

ಉಡುಪಿ: ಇಲ್ಲಿನ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಇಂದು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ಸ್ವಾಮೀಜಿಗೆ 11.30ಕ್ಕೆ ಆಪರೇಷನ್ ಮಾಡಲಿದ್ದಾರೆ.

87 ವಯಸ್ಸಿನ ಸ್ವಾಮೀಜಿ ಮೊದಲ ಬಾರಿಗೆ ಆಪರೇಷನ್‍ಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ಯಾರೂ ಭಯ- ಆತಂಕ ಪಡುವ ಅಗತ್ಯ ಇಲ್ಲ. ನಾನು ಗಟ್ಟಿಯಾಗಿದ್ದೇನೆ. ಇದೊಂದು ಚಿಕ್ಕ ಆಪರೇಷನ್. ಇತ್ತೀಚೆಗೆ ನೋವು ಜಾಸ್ತಿಯಾಗಿದ್ದರಿಂದ ವೈದ್ಯರ ಸಲಹೆಯಂತೆ ಅದನ್ನು ಉಪಶಮನ ಮಾಡಲು ಮುಂದಾಗಿದ್ದೇನೆ ಎಂದಿದ್ದಾರೆ.

ಪರ್ಯಾಯ ಅವಧಿಯಲ್ಲಿ ಹತ್ತಾರು ಕಾರ್ಯಕ್ರಮ ಇರೋದರಿಂದ ಅದಕ್ಕಿಂತ ಮುಂಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಆಪರೇಷನ್ ಮತ್ತು ವಿಶ್ರಾಂತಿಯ ಸಮಯದಲ್ಲಿ ಶ್ರೀಕೃಷ್ಣನ ಪೂಜೆಯನ್ನು ಕಿರಿಯಶ್ರೀ ಕೈಗೊಳ್ತಾರೆ. ನಾನು ಅನುಷ್ಠಾನಗಳನ್ನೆಲ್ಲಾ ಮಾಡುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *