ಲೈಂಗಿಕ ದೌರ್ಜನ್ಯವಾದ ಯುವತಿ ಜೊತೆ ಎಸಿಪಿ ಅನುಚಿತ ವರ್ತನೆ- ಎಲ್ಲಿ ಮುಟ್ಟಿದ, ಏನು ಮಾಡಿದ? ಎಂದೆಲ್ಲಾ ಪ್ರಶ್ನೆ

ಬೆಂಗಳೂರು: ಲೈಂಗಿಕ ದೌರ್ಜನ್ಯವಾದ ಯುವತಿಯ ಜೊತೆ ಎಸಿಪಿ ಅನುಚಿತವಾಗಿ ವರ್ತನೆ ಮಾಡಿದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಯುವತಿ ದೂರು ನೀಡಲು ಹೋದಾಗ ಎಸಿಪಿ, ಎಲ್ಲಿ ಮುಟ್ಟಿದ? ಏನು ಮಾಡಿದ? ಎಂದೆಲ್ಲಾ ಪ್ರಶ್ನೆ ಕೇಳಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೂರು ದಾಖಲಿಸಿಕೊಳ್ಳಬೇಕು ಎಂದರೆ ಅದನ್ನೆಲ್ಲಾ ಹೇಳಬೇಕು ಎಂದ ಎಸಿಪಿ ರವಿಪ್ರಸಾದ್ ಯುವತಿಗೆ ಹೇಳಿದ್ದಾರೆ ಎನ್ನಲಾಗಿದೆ.

ಯಶವಂತಪುರ ಸಬ್ ಡಿವಿಷನ್ ಎಸಿಪಿ ರವಿಪ್ರಸಾದ್ ಅನುಚಿತ ವರ್ತನೆ ನಡೆಸಿದ್ದು, ರವಿಪ್ರಸಾದ್‍ಗೆ ಸೋಲದೇವನಹಳ್ಳಿ ಇನ್ಸ್ ಪೆಕ್ಟರ್ ವೆಂಕಟೇಶ್ ಗೌಡ ಸಾಥ್ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಸಂತ್ರಸ್ತ ಯುವತಿ ರವಿಪ್ರಸಾದ್ ಮತ್ತು ವೆಂಕಟೇಶ್ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

 

Comments

Leave a Reply

Your email address will not be published. Required fields are marked *