ದುನಿಯಾ ವಿಜಯ್ ಸಾಹಸನ ಅನುಕರಣೆ ಮಾಡಲು ಹೋಗಿ ಜೀವನವನ್ನೇ ಕತ್ತಲುಮಾಡ್ಕೊಂಡ ಅಭಿಮಾನಿ..!

ಯಾದಗಿರಿ: ಸಿನಿಮಾದಲ್ಲಿ ತನ್ನ ನೆಚ್ಚಿನ ನಟನ ಸಾಹಸ ನೋಡಿ ರಿಯಲ್ ಲೈಫಿನಲ್ಲಿ ಅನುಕರಣೆ ಮಾಡಲು ಹೋಗಿ ಜೀವನವನ್ನೇ ಕತ್ತಲು ಮಾಡಿಕೊಂಡ ಘಟನೆಯೊಂದು ನಡೆದಿದೆ.

ಯಾದಗಿರಿಯ ಸುರಪುರದ ವಜ್ಜಲ್ ಗ್ರಾಮದಲ್ಲಿನ ಹುಲಿಗೆಪ್ಪ ಎಂಬಾತ ನಟ ದುನಿಯಾ ವಿಜಯ್‍ನ ಅಪ್ಪಟ ಅಭಿಮಾನಿ. ಸ್ನೇಹಿತರ ಜೊತೆ ದುನಿಯಾ ವಿಜಯ್ ಸ್ಟೈಲ್‍ನಲ್ಲೇ ಸ್ಟಂಟ್ ಮಾಡ್ತೀನಿ ಅಂತ ಚಾಲೆಂಜ್ ಮಾಡಿ 14 ಅಡಿಯಿಂದ ಜಿಗಿದು, ಎರಡು ಕಾಲಿನ ಪಾದದ ಮೂಳೆಗಳು ಮುರಿದುಕೊಂಡು ಹಾಸಿಗೆ ಹಿಡಿದಿದ್ದಾನೆ.

ಮನೆಯಲ್ಲಿ ಕಿತ್ತು ತಿನ್ನುಬಡತನ, ಚಿಕಿತ್ಸೆಗೆ ಹಣವಿಲ್ಲದೆ ಗಿಡಮೂಲಿಕೆಗಳ ಔಷಧಿಯ ಮೊರೆ ಹೋಗಿದ್ದಾನೆ. ಇಷ್ಟಾದರೂ ದುನಿಯಾ ವಿಜಯ್ ಮೇಲಿನ ಅಭಿಮಾನ ಇನ್ನೂ ಕಡಿಮೆಯಾಗಿಲ್ಲ. ಅಣ್ಣನನ್ನು ಭೇಟಿಯಾಗಬೇಕು, ಮಾತನಾಡಿಸಬೇಕು ಎಂದು ಹುಲಿಗೆಪ್ಪ ಸಿಕ್ಕ ಸಿಕ್ಕವರಲ್ಲಿ ಮನವಿ ಮಾಡುತ್ತಿದ್ದಾನೆ.

Comments

Leave a Reply

Your email address will not be published. Required fields are marked *