ಆಮೆ ಕರಿ ಸರಿಯಾಗಿ ಮಾಡಿಲ್ಲವೆಂದು ಪತ್ನಿಯನ್ನೇ ಕೊಂದು ಹಿತ್ತಲಲ್ಲಿ ಹೂತು ಹಾಕಿದ

ಭುವನೇಶ್ವರ್: ಸುಟ್ಟು ಹೊಗಿದ್ದ ಹೋಗಿದ್ದ ಆಮೆ (Turtle) ಕರಿಯನ್ನು ಹಾಕಿದ್ದಕ್ಕೆ ಮದ್ಯವ್ಯಸನಿಯೊಬ್ಬ ಪತ್ನಿಯೊಂದಿಗೆ (Wife) ಜಗಳವಾಡಿ ಆಕೆಯನ್ನು ಕೊಂದು ಮನೆಯ ಹಿತ್ತಲಿನಲ್ಲಿ ಹೂತಿಟ್ಟ ಘಟನೆ ಪಶ್ಚಿಮ ಓಡಿಶಾದ (Odisha) ಸಂಬಲ್‍ಪುರ ಜಿಲ್ಲೆಯಲ್ಲಿ ನಡೆದಿದೆ.

ರಂಜನ್ ಬಡಿಂಗ್ (36) ಎಂಬಾತ ಪತ್ನಿ ಸಾಬಿತ್ರಿ (35)ಯನ್ನು ಕೊಲೆ ಮಾಡಿದ್ದಾನೆ. ಈತ ಬದ್ಮಾಲ್ ಪಂಚಾಯತ್‍ನ ರೌತ್‍ಪಾರಾ ಗ್ರಾಮದ ತನ್ನ ಮನೆಗೆ ಆಮೆಯನ್ನು ತಂದಿದ್ದನು. ಇದಾದ ಬಳಿಕ ಸಾಬಿತ್ರಿ ಬಳಿ ಕರಿ ಮಾಡಿಕೊಡಲು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಸಾಬಿತ್ರಿ ಕರಿ ಮಾಡುವಾಗ ಆಮೆಯ ಮಾಂಸ ಸ್ವಲ್ಪ ಸುಟ್ಟು ಹೋಗಿತ್ತು. ಈ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿದೆ.

crime

ಘಟನೆಗೆ ಸಂಬಂಧಿಸಿ ಆಕೆಯನ್ನು ರಂಜನ್ ತೀವ್ರವಾಗಿ ಥಳಿಸಿದ್ದಾನೆ. ಇದರಿಂದಾಗಿ ಆಕೆ ಪ್ರಜ್ಞಾ ಹೀನಸ್ಥಿತಿಗೆ ತಲುಪಿದ್ದಾಳೆ. ಇದಾದ ಬಳಿಕ ಆತ ಮನೆಯಿಂದ ಹೊರಬಂದಿದ್ದಾನೆ. ಸ್ವಲ್ಪ ಸಮಯದ ನಂತರ ಮನೆಗೆ ಬಂದಾಗ ಆಕೆ ಮೃತ ಪಟ್ಟಿರುವುದನ್ನು ರಂಜನ್ ಗಮನಿಸಿದ್ದಾನೆ. ಇದಾದ ಬಳಿಕ ಯಾರಿಗೂ ತಿಳಿಯದಂತೆ ರಂಜನ್ ಶವವನ್ನು ಹಿತ್ತಲಿನಲ್ಲಿ ಹೂತು ಹಾಕಿದ್ದಾನೆ. ನಂತರ ಸಾಬಿತ್ರಿ ಕೋಪದಿಂದ ಹೊರಟು ಹೋಗಿದ್ದಾಳೆ ಎಂದು ಪ್ರಚಾರ ಮಾಡಿದ್ದಾನೆ. ಇದನ್ನೂ ಓದಿ: ಕಳ್ಳತನಕ್ಕೆ ಬಂದ ಮನೆಯಲ್ಲೇ ಖದೀಮ ಆತ್ಮಹತ್ಯೆ

ಘಟನೆಗೆ ಸಂಬಂಧಿಸಿ ಸಾಬಿತ್ರಿ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಂಜನ್‍ನ್ನು ವಿಚಾರಣೆ ನಡೆಸಿದಾಗ ಆತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಗ್ರಾಮಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದಾರೆ. ಈ ವೇಳೆ ರಂಜನ್ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – ಟ್ರಕ್‍ಗೆ ಗುದ್ದಿದ ಬಸ್ 14 ಸಾವು, 40 ಮಂದಿಗೆ ಗಾಯ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *