`ಕಾಂತಾರ’ ವಿವಾದದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಚಿತ್ರರಂಗದಲ್ಲಿ `ಕಾಂತಾರ’ (Kantara Film) ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. `ಕಾಂತಾರ’ ಆರ್ಭಟಕ್ಕೆ ಇತರೆ ಸಿನಿಮಾಗಳು ಡಲ್ ಹೊಡೆದಿದೆ. ದೈವ ಅಪ್ಪಟ ಕಥೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ನಡುವೆ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಚೇತನ್ ಹೇಳಿಕೆ ವಿವಾದ ಸೃಷ್ಟಿಸಿದೆ. ಇದೀಗ ಚೇತನ್ ಹೇಳಿಕೆಯನ್ನ ನಾನು ಒಪ್ಪೋದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Gnanendra) ಪ್ರತಿಕ್ರಿಯೆ ನೀಡಿದ್ದಾರೆ.

ಚಂದನವನದಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾಗೆ ಇಡೀ ಚಿತ್ರರಂಗವೇ ತಲೆಬಾಗಿದೆ. ಪರಭಾಷೆಯ ಸ್ಟಾರ್‌ಗಳು ಕೂಡ ಕನ್ನಡದ `ಕಾಂತಾರ’ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಹೀಗಿರುವಾಗ ನಟ ಚೇತನ್ ಮಾತಿಗೆ ಆರಗ ಜ್ಞಾನೇಂದ್ರ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ

ಎಲ್ಲರಿಗೂ ವಾಕ್ ಸ್ವಾತಂತ್ರ‍್ಯ ಇರುತ್ತೆ ಮಾತಾಡಿಕೊಳ್ಳಲಿ  ಬೇಕಾದ್ರೆ. ಆದರೆ ಚೇತನ್‌ ಮಾತನ್ನ ನಾನು ಒಪ್ಪೋದಿಲ್ಲ ಎಂದು ಖಡಕ್‌ ಉತ್ತರ ಕೊಟ್ಟಿದ್ದಾರೆ. `ಕಾಂತಾರ’ (Kantara Film) ಸಿನಿಮಾ ನಾನು ನೋಡಿದೆ ತುಂಬಾ ಚೆನ್ನಾಗಿದೆ. ನಮ್ಮ ಮಲೆನಾಡಿನ ಸೊಗಡನ್ನ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಸಿನಿಮಾವೊಂದರ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಚೇತನ್ ವಿವಾದ ಕುರಿತು ಮಾತನಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *